“ಹಾಗೆ ಒಂದು ಹನಿಗವಿತೆ. ಸ್ವೀಟ್ ಸ್ವೀಟ್ ಭಾವಗಳ ಕ್ಯೂಟ್ ಕ್ಯೂಟ್ ಅಕ್ಷರ ಪ್ರಣತೆ. ಈ ಹನಿ ಪ್ರತಿ ಜೀವ ಮಿಲನಗಳ ಹಂಬಲವೂ ಹೌದು. ಭಾವ ಬಂಧನಗಳ ಸಂಚಲನವೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಮುಖಾಮುಖಿ
ಆಗುವುದೆಂದರೆ..
ಮುಖವಾಡಗಳ
ಧರಿಸಿ ಅಲ್ಲ.!
ಮನದ ಮಾತುಗಳ
ತೆರೆದು ನಲ್ಲ.!!
ನಿನ್ನೊಳು ನಾನು
ನನ್ನೊಳು ನೀನು
ಐಕ್ಯವಾಗುವುದೆಂದರೆ..
ಬಾಹುಬಂಧನದಿ ಅಲ್ಲ.!
ಭಾವಬಂಧನದಿ ನಲ್ಲ!!
- ಎ.ಎನ್.ರಮೇಶ್. ಗುಬ್ಬಿ- ಲೇಖಕರು, ಕವಿಗಳು, ಕೈಗಾ.
