‘ಮುಂಗಾರಿನ ಒಲವು’ ಕವನ – ಸೋಮೇಶ್ ಕಣದೂರ್

ಹಚ್ಚಸಿರಂತಿದೆ ನಮ್ಮಿಬ್ಬರ ಒಲವ ನೆನಪು… ಕೋರುವೆನು ನಿನ್ನ, ಕನಸಲ್ಲಾದರೂ ತಲುಪು…ಸೋಮೇಶ್ ಕಣದೂರ್  ಅವರು ತಮ್ಮ ವಿವಾಹವಾರ್ಷಿಕೋತ್ಸವದ ಸಂದರ್ಭದಲ್ಲಿ ನಲ್ಮೆಯ ಮಡದಿಗಾಗಿ ಬರೆದ ಒಂದು ಒಲವಿನ ಕವಿತೆ…

ಮುಂಗಾರಿನಲ್ಲಿ ಒಲವಿನ ಸೆಳೆಯು,
ತಂಗಾಳಿಯಲ್ಲೂ ಸೋಕಿದೆ ಕಿಡಿಯು,
ಮಳೆಗಾಲದಲ್ಲಿ ಹನಿಗಳ ಹೊಳೆಯು,
ಹನಿ ಹನಿ ಹೀರಿ ತಂಪಾಗಿದೆ ಇಳೆಯು.

ಮತ್ತೆಲ್ಲವ ನೆನಪಿಸಿ ಹುಚ್ಚಿಡಿದಿದೆ ಮನವು,
ಹೊಸ ನಿರೀಕ್ಷೆಯ ಹೆಚ್ಚಿಸಿದೆ ತನುವು,
ಕೊಟ್ಟಂತಿದೆ ನಿನ್ನಾಗಮನದ ಸುಳಿವು,
ಹನಿಗಳ ಸಿಂಚನದಿ ತಣಿದಿದೆ ಮನವು.

ಹಚ್ಚಸಿರಂತಿದೆ ನಮ್ಮಿಬ್ಬರ ಒಲವ ನೆನಪು,
ಕೋರುವೆನು ನಿನ್ನ ಕನಸಲ್ಲಾದರೂ ತಲುಪು,
ಈ ಜೀವವು ನಿನಗಾಗಿಯೇ ಮುಡಿಪು,
ನೀ ಸಿಗಲು ನನ್ನ ಬಾಳೆಲ್ಲ ಹೊಳಪು..


  • ಸೋಮೇಶ್ ಕಣದೂರ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW