ಪ್ರತಿ ಕ್ಷಣ, ಪ್ರತಿಯೊಂದು ನಿಮಿಷ ನಿಮಗಾಗಿ ಜೀವಿಸಿ ಬಿಡಿ…ಇಲ್ಲವಾದರೆ ಇಂದಿನ ವರ್ತಮಾನ, ನಾಳೆಗೆ ಹಳತಾಗಿ ಹೋಗುವುದು ಜೀವದ ಸಾರವನ್ನು ಈ ಕವಿತೆ ಸಾರುತ್ತದೆ. ಕವಿಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಲೇಖನಿಯನಲ್ಲಿ ಮೂಡಿದ ‘ಮುಸುಕಿನ ತೆರೆ’ ಕವನವನೊಮ್ಮೆ ಓದಿ…
ಅರಿತು ನೋಡಲೇ
ಇಲ್ಲ , ಬೆರೆತು ಕೇಳಲೇ ?
ಪರದೆ ಸರಿಸಲು
ಮುಖವಾಡಗಳೇ ಕಾಣುವಾಗ
ಕಂಡು ಕಾಣದಂತೆ
ಇದ್ದುಬಿಡಲೇ..??
ಉರುಳಿದ ಘಳಿಗೆಯು
ಕಾಡುವುದು ಈ ಬದುಕೆಲ್ಲಾ ..!!
ಕ್ಷಣ ಕ್ಷಣವು ನೆನಪಿಡುವ
ಭರದಲಿ ಜಾರುವದು
ಈಗಿನ ಹೊತ್ತು …..
ಇಂದಿನ ವರ್ತಮಾನ ನಾಳೆಗೆ
ಹಳತಾಗಿ ಹರಿಯುವಾಗ
ವರ್ಷಗಳೇ ಉರುಳಿ
ಕ್ಷಣವಾಗಿ ಸವೆಯುವಾಗ
ಎದೆಯು ಅಗ್ನಿಕುಂಡವಾಗಿ
ಉರಿಯ ಬೇಕೇ ?
ನಾಳೆಯ ಭರದಲ್ಲಿ
ಇಂದಿನ ಹಸಿ ಕ್ಷಣಗಳು
ಬಿಸಿಯಾಗಿ ಎದೆಯ
ದಹಿಸುವಾಗ ನಾ ನಗುತ್ತಲೇ
ನೋಡಬೇಕಾ..?
- ರೇಶ್ಮಾ ಗುಳೇದಗುಡ್ಡಾಕರ್