ಅರಿಯದೆ ಮಾಡಿದ ಪಾಪಕ್ಕೆ ಕ್ಷಮೆಯುಂಟು ! ಅರಿತು ಅರಿತು ಮಾಡಿದ ಪಾಪಕ್ಕೆ ಕ್ಷಮೆಯುಂಟೆ !!…ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ಬಿಸಿಲ ಬೇಗೆಯನ್ನು ಸಹಿಸಲಾಗದು ಇಂದು !
ಇನ್ನೆಂಥ ಕಾಲ ಬರುವುದು ಗೊತ್ತಿಲ್ಲ ಮುಂದು !!
ಗಿಡ ಮರಗಳ ಕಡಿದು ಪರಿಸರ ನಾಶ ಮಾಡಿದ ಮಾನವ !
ಮಳೆ ಬೆಳೆಯೆಲ್ಲ ಮಾಯವಾಗಿ ಕಾಲವು ಬಂದಿತು ಬಿಸಿ ಗಾಳಿಯ ಸೇವಿಸುವ !!
ದುರಾಸೆಯ ನಮಗೆ ಮುಂದಿನ ಘೋರತೆಯ ಬಗ್ಗೆ ಅರಿವಿಲ್ಲ !
ನಾವು ದುಡ್ಡು ಮಾಡಿಕೊಂಡು ಚೆನ್ನಾಗಿ ಬದುಕಿದರೆ ಸಾಕಲ್ಲ !!
ನೀನು ಬಿಟ್ಟ ನಿಟ್ಟುಸಿರನೇ ನೀನು ಕುಡಿಯಬೇಕು !
ನೀನು ಮಾಡಿದ ಪಾಪದ ಫಲವನ್ನು ನೀನೆ ಅನುಭವಿಸಬೇಕು !!
ಅರಿಯದೆ ಮಾಡಿದ ಪಾಪಕ್ಕೆ ಕ್ಷಮೆಯುಂಟು !
ಅರಿತು ಅರಿತು ಮಾಡಿದ ಪಾಪಕ್ಕೆ ಕ್ಷಮೆಯುಂಟೆ !!
ಮುಂದೊಂದು ದಿನ ಹಣ ಸುರಿದರು ಪ್ರಾಣವಾಯು ಸಿಗಲಿಕ್ಕಿಲ್ಲ !
ಆಗ ನೀನು ನೂರಾರು ದೇವರ ಬೇಡಿಕೊಂಡರು ಉಳಿಯುವುದಿಲ್ಲ !!
ಇರುಳ ಕಂಡ ಬಾವಿಗೆ ಯಾರಾದರೂ ಹಗಲು ಬೀಳುವುದುಂಟೆ !
ಹಗಲೇ ಅಡಗಿಕೊಳ್ಳಲು ನಿನಗೆ ಈಗ ಎಲ್ಲಿಯಾದರೂ ತಾಣವುಂಟೆ !!
ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ !
ಎಲ್ಲ ಕೆಲಸವ ಬದಿಗೊತ್ತಿ ಸಸಿಯ ನೆಟ್ಟು ಪೂಷಿಸದಿದ್ದರೆ ನಿನ್ನ ಸಂತತಿ ಬದುಕುವುಳಿಯುದಿಲ್ಲ !!
ಮಕ್ಕಳಂತೆ ನಿನ್ನ ಪೋಷಿಸುವ ಪರಿಸರ ತಾಯಿ ಸಮಾನ !
ಸಲ್ಲಿಸು ಅನುದಿನ ಅದಕ್ಕೆ ತುಂಬು ಹೃದಯದ ನಮ ನ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.
