ನೀನೇ ಚೆನ್ನ…ನೀನೇ ರನ್ನ… ನಿoಗ್ಯಾಕೆ ಬೇಕೆ ಚಿನ್ನ!?… ಅಕ್ಷಯ ತೃತೀಯ ದಿನ ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಹನಿಗವನಗಳನ್ನು ತಪ್ಪದೆ ಮುಂದೆ ಓದಿ…
ಸಾಲ ಮಾಡಿಯಾದರೂ ಸರಿ
ಕೊಡಿಸಬೇಕು ಈ ದಿನ
ಹೆಂಡತಿಗೆ ಚಿನ್ನ
ಇಲ್ಲವಾದಲ್ಲಿ ಬೀಳುತ್ತದೆ
ಅಡುಗೆ ಮನೆಯ ಪಾತ್ರೆಗಳಿಗೆ
ಗುನ್ನ!!
* * *
ಈ ದಿನ ಅಕ್ಷಯ ತೃತೀಯ
ಕೊಡಿಸಿಬಿಡಬೇಕು ಹೆಂಡತಿಗೆ
ಚಿನ್ನದ ಹಾರ
ಇದರಿಂದ ನಾ ತಪ್ಪಿಸಿಕೊಳ್ಳಬಹುದು
ಅವಳಿಂದಾಗುವ
ಪ್ರಹಾರ!!
* * *
ನೀನೇ ಚೆನ್ನ
ನೀನೇ ರನ್ನ
ನಿoಗ್ಯಾಕೆ ಬೇಕೆ ಚಿನ್ನ!?
ಅಂತ ರಮಿಸಿದ ಕವಿ
ಹಿತವಾಗಿ ಇಟ್ಟ
ಹೆಂಡತಿ ಆಸೆಗೆ ಗುನ್ನ!!
* * *
ಯಾವ ಜ್ಯುವೆಲರಿಯಿಂದ
ತಂದು ಕೊಡಲಿ
ಹೆಂಡತಿಗೆ ಚಿನ್ನ!?
ಯೋಜನೆ ರೂಪಿಸುತಿರುವೆ
ಹಾಕಬೇಕಲ್ಲ
ಈ ರಾತ್ರಿಗೆ ಕನ್ನ!!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
