‘ಸಾಕಿದಮ್ಮನ ತೊರೆದ ಹಕ್ಕಿ’ ಕವನ

ಬಡಬಡಿಸಿ ರೆಕ್ಕೆಯನು ಓಲಾಡಿ ಬೀಳುತಿರೆ, ಹಿಡಿದು ಕಾಯುತಲಿದ್ದೆ ಧರೆಗೆ ಬೀಳದಲೆ… ಕವಿ ಅಪ್ಪಯ್ಯ ಯು ಅವರ ಲೇಖನಿಯಲ್ಲಿ ಅರಳಿದ ಸುಂದರವನ್ನು ತಪ್ಪದೆ ಮುಂದೆ ಓದಿ…

ಅತ್ತಿತ್ತ ಹುಡುಕಾಡಿ
ಸುತ್ತೆಲ್ಲ ತಡಕಾಡಿ
ಕಡ್ಡಿ ದಾರಗಳ
ಪೋಣಿಸಿದೆ ಓಡಾಡಿ /

ಮೊಟ್ಟೆಇಡಬೇಕೆಂದು
ಕಾವುಕೊಡಬೇಕೆಂದು
ಕಾಡಿನಲಿ ಶತ್ರುಗಳ
ಕಣ್ಣು ತಪ್ಪಿಸಲೆಂದು/

ಮೊಟ್ಟೆ ಇಟ್ಟರೆ ಸಾಕೆ
ಕಾವುಕೊಡುತಿರಬೇಕೆ
ಮೊಟ್ಟೆಕುಡಿಯಲು
ಬರುವ ಶತ್ರು ಇದೆ ಜೋಕೆ /

ತತ್ತಿ ಒಡೆಯಲು ಬೇಕು
ನನ್ನ ಮೈಯ್ಯ ಕಾವು
ನಾನಿಲ್ಲೆ ಮಲಗದಿರೆ
ಮರಿಗಳಿಗೆ ಸಾವು /

ಸತತ ತಪವನು ಮಾಡಿ
ಕಾವುಕೊಟ್ಟೆನು ದಿನವೂ
ಮುದ್ದು ಮರಿಗಳ ಕಂಡು
ಹಿಗ್ಗಿದೆನು ನೋಡಿ /

ದಿನದಿನವು ಆಹಾರ
ಹುಡುಕಿ ನಾ ತಂದಿತ್ತೆ
ಗಡಿಗಡಿಗೆ ಕೊಕ್ಕಿನಲಿ
ನೀರನಿತ್ತೆ /

ಬಡಬಡಿಸಿ ರೆಕ್ಕೆಯನು
ಓಲಾಡಿ ಬೀಳುತಿರೆ
ಹಿಡಿದು ಕಾಯುತಲಿದ್ದೆ
ಧರೆಗೆ ಬೀಳದಲೆ /

ಬಲಿಯುತಿದೆ ರೆಕ್ಕೆಗಳು
ಇಣುಕಿ ನೋಡಿತು ಹೊರಗೆ
ಹಾರಾಡುತಿದ್ದುವೆಲಾ
ಹಲವು ಹಕ್ಕಿಗಳು/

ನಾವ್ಯಾಕೆ ಗೂಡಿನೊಳು
ಬಂದಿಯಾಗಿರಬೇಕು
ಹಾರಾಡಿನೋಡುವೆವು
ಪ್ರಕೃತಿಯನ್ನು/

ಹಾರಾಡೊ ಹುಮ್ಮಸ್ಸು
ಜೋರಾಯಿತವುಗಳಿಗೆ
ಚಕಚಕನೆ ನೆಗೆದವಲಾ
ಗೂಡಿನಿಂದೊರಗೆ/

ಒಂದುದಿನ ಹಾರಿದವು
ಹೊರಳಿ ಗೂಡಿಗೆ ಬಂತು,
ಮರಳಿ ಹಾರಿದವೆಲ್ಲೊ
ಅಮ್ಮನೊಲವನು ಮರೆತು/

ಇಷ್ಟುದಿನ ತಪಗೈದು
ಅನ್ನ-ನೀರನು ಬಿಟ್ಟು
ಜೋಪಾನ ಮಾಡಿದುದು
ಕೈಜಾರಿಹೋಯ್ತು /

ಹಕ್ಕಿಹಾರಿತು ನೋಡು
ಗೂಡಬಿಟ್ಟು
ಇಷ್ಟುದಿನ ಸಾಕಿದಮ್ಮನನು
ದೂರವಿಟ್ಟು /


  • ಅಪ್ಪಯ್ಯ ಯು – ಕಾಸರಗೋಡು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW