‘ಯಾರಿವನು?’ ಕವನ – ಅಪ್ಪಯ್ಯ ಯು

ಗಂಡನನ್ನು ಕೊಂದು ಅವಳ ಮಾಂಗಲ್ಯವ ಕಸಿದವರ ಅವರು ಯಾರು?…ಕವಿ ಅಪ್ಪಯ್ಯ ಯು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು ತಪ್ಪದೆ ಮುಂದೆ ಓದಿ…

ಜಗವೆ ಎದ್ದು ಗೌರವಿಸುವ
ಧೀರನವನು ಯಾರದು/

ಹೊಳೆವಕಣ್ಣ ಬಿಳಿಯಗಡ್ಡ
ವಿರಮಿಸದ ಧೀರನು /

ಕಣ್ಣುಬಿಟ್ಟು ಗುಡುಗಿದರೆ
ವೈರಿಗಳೇ ಪಲಾಯನ
ಭ್ರಷ್ಟರೆದೆಯ ಕುಟ್ಟಿ ಮೆಟ್ಟಿ
ಯಮಲೋಕಕಟ್ಟೊ ಕಾಲನ /

ದೇಶದೊಳಗೆ ದುಷ್ಟಶಕ್ತಿ
ಅಟ್ಟಹಾಸ ಮೆರೆಯಲು
ಜಾತಿಜಾತಿಗಳ ಎತ್ತಿ ಕಟ್ಟಿ
ಒಡೆದುಬಿನ್ನ ಮಾಡಲು /

ದೇವಧೂತನಂತೆ ಧರೆಗೆ
ಇಳಿದುಬಂದನಾರದು? /

ದೇಶವೆಲ್ಲ ಕೇಸರಿಯ
ರಂಗು ಚೆಲ್ಲಬಂದನೆ
ಲೋಕವೆಲ್ಲ ಹಿಂದು ಹವಾ
ಹಬ್ಬಲೆಂದು ಹೊರಟನೆ /

ಮದುಚಂದ್ರಕೆ ಕಾಶ್ಮೀರಕೆ
ವಿಹಾರಕಾಗಿ ಬಂದವರ
ಗಂಡನನ್ನು ಕೊಂದು
ಅವಳ ಮಾಂಗಲ್ಯವ ಕಸಿದವರ
ನಿರ್ದಾಕ್ಷಿಣ್ಯ ದಿಂದ ತರಿದು
ಯಮಲೋಕಕಟ್ಟಿದವನ/

ದೋಕಲಾಮ್ ನಲ್ಲಿ ಚೈನ
ಕಾಲುಕೆರೆದು ಬಂದರೂ
ಆತನೊಮ್ಮೆ ಹೂಂಕರಿಸಲು
ಚದುರಿಹೋದರೆಲ್ಲರೂ /

ಪಾಕಿಗಳ ಅಟ್ಟಹಾಸ
ಮೆರೆಯುತಿದ್ದು ಗಡಿಯಲಿ
ಓಪರೇಷನ್ ಸಂಧೂರ ಎಂಬ
ಮಂತ್ರದಂಡ ಕೈಯಲಿ /

ಶತ್ರುಗಳೇ ನಡುಗುತಾರೆ
ಮೋದಿಹವಾ ಬೀಸಲು
ವಿರೋದ ಹಸ್ತ ಕರಗಿಹೋಯ್ತು
ಕಮಲನೆಟ್ಟು ಬೆಳೆಸಲು/


  • ಅಪ್ಪಯ್ಯ ಯು – ಕಾಸರಗೋಡು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW