‘ಮನೋ ಮಂದಿರ ಮುಟ್ಟಿದೆ, ನೋಡಿದೆ…ಆದರೆ’….ತಪ್ಪದೆ ಓದಿ ಕವಿ ಸುನಿಲ್ ಎಸ್ ಅವರ ಲೇಖನಿಯಲ್ಲಿ ಅರಳಿದ ಕವನ….
ಅವಳ
ಮನೋ ಮಂದಿರಕ್ಕೆ
ನಾನೆ
ಪೂಜಾರಿಯಾಗಬೇಕೆಂದು
ಹೊರಟೆ !
ಹೊರಗೆ ಕಾರಗತ್ತಲು
ನೀರವ ಮೌನ, ನಿಶಬ್ದ,
ಎದೆಯೊಳಗೆ
ಕದಡಿದ ತುಮುಲಗಳು
ಅಡಿಗಡಿಗೆ
ಅವಳ ಸೌಂದರ್ಯದ
ಸಾಂಕೇತಿಕ ಬಿಂಬ
ಪ್ರತಿಬಿಂಬಗಳು !
ಅವಳ ರೂಪ ಪ್ರತಿರೂಪಗಳ
ಹಪಾಹಪಿ !
ಭಾರವಾದ ಹೆಜ್ಜೆಗಳೊಂದಿಗೆ
ವೇಗದ ನಡಿಗೆ !
ಮತ್ತದೆ ಕಾಡು ಕತ್ತಲೆ
ಒಮ್ಮೊಮ್ಮೆ ಉತ್ಸಾಹ
ನಿರುತ್ಸಾಹ ಭೇಟಿಯಾದಂತೆ !
ಇನ್ನೇನು ಅವಳ ಮನೋ
ಮಂದಿರ ಮುಟ್ಟಿದೆ, ನೋಡಿದೆ,
ಅವಳು ಬೆಚ್ಚನೆ ಮಲಗಿದಳು.
ಅವಳ ಮನೋ ಮಂದಿರದ ದ್ವಾರ ಪಾಲಕ ಈಗಾಗಲೇ ನೇಮಕವಾಗಿದ್ದ….
- ಸುನಿಲ್ ಎಸ್ – ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಕವಿಗಳು
