‘ಪುನರಾರಂಭ’ ಕವನ – ಪದ್ಮನಾಭ. ಡಿ.

ಅಂತ್ಯದ ಬಳಿಕ ಉಂಟು ಆರಂಭವು, ಶಿಶಿರದ ಬಳಿಕ ಬಾರದೇ ವಸಂತವು…ಕವಿ ಪದ್ಮನಾಭ.ಡಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಮಾಗಿಯ ಕಾಲದ ನಸುಕಿನ ವೇಳೆ
ಎಲೆಗಳ ಮೇಲೆ ಕೊಂಬೆಯ ಮೇಲೆ
ಕಂಬನಿಯಂತೆ ಮಂಜಿನ ಹನಿಗಳು
ವಿದಾಯ ಹೇಳಿವೆ ಮರಕೆ ಎಲೆಗಳು//

ಸುಯ್ಯನೆ ಮಾರುತ ಬೀಸುತಲಿರಲು
ಎಲೆಗಳು ದೂರಕೆ ಹೋಗುತಲಿರಲು
ನಿಶ್ಚಲವಾಗಿಯೇ ನಿಂತಿದೆ ಮರವು
ಒಳಗಿದ್ದರೂ ವಿದಾಯದ ದುಃಖವು//

ಎಲೆಗಳು ಉದುರಿ ದೂರಾದರೇನು
ಸ್ವಾಗತಿಸುವೆ ನಾ ಹೊಸ ಚಿಗುರನ್ನು
ಆದರಿಸುವೆ ತನ್ನೆಡೆಗೆ ಬಂದವರನ್ನು
ನೀಡುವೆ ನೆರಳನ್ನು ಸಿಹಿಫಲವನ್ನು//

ಅಂತ್ಯದ ಬಳಿಕ ಉಂಟು ಆರಂಭವು
ಶಿಶಿರದ ಬಳಿಕ ಬಾರದೇ ವಸಂತವು
ಪುನರಾರಂಭವೇ ಸೃಷ್ಟಿ ನಿಯಮವು
ಎಂಬುವ ಪಾಠವ ಹೇಳಿದೆ ಮರವು//


  • ಪದ್ಮನಾಭ. ಡಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading