ಬೇರೆಯವರ ಬಗ್ಗೆ ಹಾಗೆ ಹೀಗೆ ಅನ್ನುವ ಬದಲು ನಮ್ಮ ಅಂತರಂಗ ಶುದ್ಧವಾಗಿರಲಿ…ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…
ತಾಜ್ ಮಹಲ್ ಮುಂದೆ ನಿಂತು, ತಾಜ್ ಮಹಲ್ ಎಲ್ಲಿ ಎಂದು ಯಾರಾದರೂ ಕೇಳಿದಾಗ, ತಾಜ್ ಕಡೆ ತೋರುಬೆರಳು ಮಾಡಿ ತೋರಿಸುತ್ತೇವೆ ಅಲ್ಲಿದೆಯೆಂದು.
ಭೌತಶಾಸ್ತ್ರದ ಅನ್ವಯ ಬೆಳಕು ತಾಜ್ ಮೇಲೆ ಬಿದ್ದು ಪ್ರತಿಫಲಿಸಿ ಮರಳಿ ಬಂದು, ನಮ್ಮ ಕಣ್ಣಲ್ಲಿ ಪ್ರವೇಶಿಸಿ ಕಣ್ಣಿನ ಅಕ್ಷಿಪಟಲದ ಮೇಲೆ ತಲೆಕೆಳಗಾದ ಪ್ರತಿರೂಪವನ್ನು ಮೂಡಿಸಿದಾಗ ತಾಜ್ ನಮಗೆ ಕಾಣುವಂತೆ ಭಾಸವಾಗುತ್ತದೆ. ಅಂದರೆ ತಾಜ್ಮಹಲ್ ನ್ನು ಮೊದಲು ನಾವು, ನಮ್ಮ ಕಣ್ಣೊಳಗೆ ನೋಡುತ್ತೇವೆ ಆದರೆ ತೋರು ಬೆರಳಿಂದ ತೋರಿಸುವುದು ಮಾತ್ರ ಹೊರಗಡೆ.
ಜೀವನದಲ್ಲಿ ಎಲ್ಲವನ್ನೂ ಮೊದಲು ನಾವು ನಮ್ಮೊಳಗೆ ಕಂಡುಕೊಳ್ಳುತ್ತೇವೆ. ಕೈ ಮಾಡಿ ತೋರಿಸುವುದು ಮಾತ್ರ ಹೊರಗೆ. ಜೀವನವನ್ನು ನೋಡುವ ಕ್ರಮ ನಮ್ಮೊಳಗಿನಿಂದಲೇ ಪ್ರಾರಂಭ ಎನ್ನುವ ಅರಿವಾದಾಗ ಹೊರ ಜಗತ್ತನ್ನು ಹೇಗೆ ನೋಡಬೇಕೆಂಬ ಬದಲಾವಣೆ ಸಾಧ್ಯವಾಗುವುದು.
ಕೈತೋರಿಸಿ ಅವನು ಸರಿಯಿಲ್ಲ, ಅವಳು ಸರಿಯಿಲ್ಲ, ಈ ಪ್ರಪಂಚ ಸರಿಯಿಲ್ಲ ಎಂದು ದೂರುತ್ತಾ ಸಾಗುತ್ತೆವೆ. ನಿಜವಾಗಿಯೂ ನಾವು ಆ ದೃಷ್ಟಿಕೋನದಲ್ಲಿ ನಮ್ಮೊಳಗೆ ಮೊದಲು ನೋಡಿಕೊಂಡು, ಆಮೇಲೆ ಪ್ರಪಂಚದತ್ತ ಕೈ ತೋರುತ್ತ ಸಾಗುತ್ತೆವೆ.
ನಮ್ಮೊಳಗೆ ನೋಡುವ ರೀತಿ ಬದಲಾಗಲಿ, ನೋಡುವ ದೃಷ್ಟಿ ಸರಿಯಾಗಲಿ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಜೀವನದಲ್ಲಿ ಯಾರು ತೃಪ್ತರು
- ಡಾ. ರಾಜಶೇಖರ ನಾಗೂರ
