‘ಉಳ್ಳವರು ಶಿವಾಲಯ ಮಾಡಲಿ’ ಕವನ

ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಕವನ, ತಪ್ಪದೆ ಮುಂದೆ ಓದಿ…

ಉಳ್ಳವರು ಕೂಡಿ ಶಿವಾಲಯ ಮಾಡಲಿ !
ಇಲ್ಲದವರು ಹಗಲಿರುಳು ದುಡಿದು ಸಾಯಲಿ !!

ಉಳ್ಳವರು ಮೃಷ್ಟಾನ್ನಭೋಜನ ಮಾಡಲಿ !
ಇಲ್ಲದವರು ದಿನನಿತ್ಯವೂ ಉಪವಾಸ ಸಾಯಲಿ !!

ಉಳ್ಳವರು ಒಳ್ಳೆಯ ಮನೆಯಲ್ಲಿ ವಾಸಿಸಲಿ !
ಇಲ್ಲದವರು ಹರಕು ಗುಡಿಸಲಿನಲಿ ತಲೆಯೊಡ್ಡಲಿ !!

ಉಳ್ಳವರು ರೇಷ್ಮೆ ಅರಿವೆ ಧರಿಸಿ ಮೆರೆಯಲಿ !
ಇಲ್ಲದವರು ಹರಕು ಅಂಗಿಯಲಿ ಬದುಕು ಸವೆಸಲಿ !!

ಉಳ್ಳವರು ನಿರಂತರ ದಬ್ಬಾಳಿಕೆ ಮಾಡುತ್ತಿರಲಿ !
ಇಲ್ಲದವರು ಎಲ್ಲವನು ಸಹಿಸಿ ನಂಜುಂಡರಾಗಲಿ !!

ಉಳ್ಳವರ ಹಗೆತುಂಬಾ ಹಣ ತುಂಬಿತುಳುಕಲಿ !
ಇಲ್ಲದವರು ದಿನನಿತ್ಯ ಬದುಕಲು ಹೋರಾಡುತ್ತಿರಲಿ !!

ಉಳ್ಳವರು ಮುಂದಿನ ಪೀಳಿಗೆಗೆ ಆಸ್ತಿ-ಪಾಸ್ತಿ ಕೂಡಿಡಲಿ !
ಇಲ್ಲದವರು ಮಕ್ಕಳಿಗೆ ಸಾಲದ ಹೊರೆಯನು ಬಳುವಳಿ ಬಿಡಲಿ !!

ಉಳ್ಳವರು ಮಾಡಿದ ಪಾಪಕ್ಕೆ ರೋಗರುಜಿನಗಳಿಗೆ ಬಲಿಯಾಗಲಿ !
ಇಲ್ಲದವರು ಶ್ರಮವಹಿಸಿ ದುಡಿದು ದೇಹ ಮುಪ್ಪಾದರೂ ಆರೋಗ್ಯವಂತರಾಗಿರಲಿ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW