ಕಾದಿರುವಳು ಇಳೆ ( ವಸುಂಧರೆ )

ವಸುಂಧರೆ ತಲ್ಲಣವನ್ನು ಕವನದರೂಪವನ್ನು ಕೊಟ್ಟಿದ್ದಾರೆ ಪ್ರಭಾಕರ್ ತಾಮ್ರಗೌರಿ.ಅವರ ಕವನವನ್ನು ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಮೇಘರಾಜನ ಬರುವಿಕೆಗಾಗಿ
ಹಗಲಿರುಳು ಉರಿಯುತಿಹಳು
ವಿರಹ ವೇದನೆಯಲಿ
ಕಳೆದ ಸುಂದರ
ದಿನಗಳ ನೆನೆದು ವಸುಂಧರೆ !

ನಿನ್ನ ನೆನಪಿನಲಿ ಕಾತರಿಸಿ
ಬಳಲಿ ಬೆಂಡಾಗಿಹಳು
ಒಡಲೆಲ್ಲಾ ಬೆಂಕಿಯ ಜ್ವಾಲೆ
ಯಾರ ತಪ್ಪಿಗೆ
ಯಾರಿಗೋ ಶಿಕ್ಷೆ
ಯಾರದೋ ಕ್ರೌರ್ಯಕ್ಕೆ ಬಲಿಯಾಗಿಹಳು
ಈ ವಸುಂಧರೆ ( ಇಳೆ )

ಸದಾ ಹಸಿರುಟ್ಟು
ನಲಿಯುತ್ತಿದ್ದ ವಸುಂಧರೆ
ಇಳೆಯ ಚೆಲುವಿಕೆ ಮಾಯವಾಗಿ
ನೀನು ದೂರ ಸರಿಯುತಿರುವಿಯೇನು ….?

ನಿನ್ನ ಒಂದೊಂದು ಹನಿಯೂ
ವಸುಂಧರೆಗೆ ಅಮೃತ ಸಿಂಚನ
ನಿನ್ನ ಒಲವಿನ ಧಾರೆ
ನೀಡಬಲ್ಲದು ಇಳೆಗೆ
ಹೊಸ ಯೌವನ !

  • ಪ್ರಭಾಕರ್ ತಾಮ್ರಗೌರಿ

97071578_1061252307608487_3798392995531718656_o

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading