ಕವಿಯತ್ರಿ ಶ್ರೀದೇವಿ ಕೆರೆಮನೆ ಅವರ ಮೊದಲ ಗಜಲ್ ಸಂಕಲನ ‘ಅಲೆಯೊಳಗಿನ ಮೌನ’. ಉರ್ದು ಕಾವ್ಯ ಪ್ರಕಾರದಲ್ಲಿ ಮೆರೆದ ಗಜಲ್ ಗಳು ಕನ್ನಡದಲ್ಲೂ ಈಗ ಜನಪ್ರಿಯ ವಾಗುತ್ತಿವೆ. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ಅಲೆಯೊಳಗಿನ ಮೌನ
ಲೇಖಕರು: ಶ್ರೀದೇವಿ ಕೆರೆಮನೆ
ಪ್ರಕಾಶನ : ಕ್ರಾಂತಿ ಪ್ರಕಾಶನ ಧಾರವಾಡ
ಮುದ್ರಣದ ವರ್ಷ:೨೦೧೮
ಪುಟಗಳು: ೭೨
ಬೆಲೆ: ರೂ. ೮೦
ಉರ್ದು ಮತ್ತು ಹಿಂದಿಯಲ್ಲಿ ಕೇಳುಗನ ಜೀವಭಾವ ಸೆಳೆದುಕೊಂಡು ಪ್ರಸಿದ್ಧಿ ಪಡೆದ ವಿಶೇಷ ಕಾವ್ಯ ಪರಂಪರೆಯ ಹೆಸರೇ ಗಜಲ್.

ಈ ಜಗತ್ತು ಪ್ರೀತಿ ಎನ್ನುವ ತಳಹದಿಯ ಮೇಲೆ ನಿಂತಿದೆ. ಕೋಪ, ಮತ್ಸರ, ವಿರಹ, ದುಃಖ ಹೀಗೆ ಉಳಿದೆಲ್ಲ ಭಾವಗಳು ಪ್ರೀತಿಯನ್ನು ಸುತ್ತುವರೆದಿದೆ. ಬಹುತೇಕ ಕವಿಗಳಿಗೆ ಪ್ರೀತಿಯೇ ಮೂಲ ವಸ್ತು. ಅದರಲ್ಲೂ ಗಜಲ್ ಎನ್ನುವ ಅದ್ಭುತ ಪ್ರಕಾರಕ್ಕಂತೂ ಪ್ರೀತಿಯೇ ದೈವ. ಹಿಂದೊಮ್ಮೆ ಉರ್ದು ಕಾವ್ಯ ಪ್ರಕಾರದಲ್ಲಿ ಮೆರೆದ ಗಜಲ್ ಗಳು ಕನ್ನಡದಲ್ಲೂ ಈಗ ಜನಪ್ರಿಯ ವಾಗುತ್ತಿವೆ. ಪ್ರೀತಿ ಹಾಗೂ ವಿರಹದ ಉತ್ಕಂಟತೆಯನ್ನು ಸಾದರ ಪಡಿಸಲು, ಯಾವುದೇ ಭಾವ ತೀವ್ರತೆಯನ್ನು ಸರಾಗವಾಗಿ ಹೇಳಲು ಅನುಕೂಲವಾಗುವ ಇಂತಹ ೫೬ ಗಜಲ್ ಗಳನ್ನು ಸೇರಿಸಿ ಈ ಸಂಕಲನವನ್ನು ಪ್ರಕಟಿಸಲಾಗಿದೆ ಎಂದು ಶ್ರೀದೇವಿಯವರು ಮುನ್ನುಡಿಯಲ್ಲಿ ಹೇಳಿದ್ದಾರೆ.

ದ್ವಿಪದಿಯಲ್ಲಿ ಬಂದ ಗಜಲ್ ೫ ರಿಂದ ೨೪ ದ್ವಿಪದಿಯಲ್ಲಿ ಇರಬೇಕೆಂಬ ನಿಯಮಾವಳಿ ರೂಢಿಸಿಕೊಂಡ ಇದರ ಎರಡು ಸಾಲುಗಳಿಗೆ ‘ಮತ್ಲಾ’ ಎನ್ನುತ್ತಾರೆ. ಅಂತಿಮ ಸಾಲಿನ ಎರಡು ಶಬ್ಧಗಳಿಗೆ ಕಾಫಿಯಾ ಹಾಗೂ ಪ್ರಾಸಕ್ಕೆ ‘ರದೀಪ್’ ಮತ್ತು ಕೊನೆಯ ದ್ವಿಪದಿಗೆ ‘ಮಕ್ತಾ’ ಎನ್ನುವರು. ಈ ಸಾಲಿನಲ್ಲಿ ಕವಿಯ ಕಾವ್ಯನಾಮ ಬಳಸುವ ಸಂಪ್ರದಾಯವಿದೆ. ಅಂತೆಯೇ ಶ್ರೀದೇವಿ ಕೆರೆಮನೆ ಯವರು ‘ಸಿರಿ’ ಎಂಬ ಅಂಕಿತ ನಾಮದೊಡನೆ ಮುಕ್ತಾಯ ಹೊಂದುವ ಗಜಲ್ ಗಳನ್ನು ಬರೆದಿದ್ದಾರೆ.
ಇಲ್ಲಿನ ಗಜಲ್ ಗಳ ಸುಂದರವಾದ
ಸಾಲುಗಳನ್ನು ನೋಡಿ….
- ಒಲವ ಹಾದಿಯಲ್ಲಿ ಗುಲ್ ಮೊಹರ್ ಹಾಸಿದ್ದೇನೆ. ನೀ ಎಲ್ಲಿದ್ದರೂ ಬಂದು ಬಿಡು ಮಲ್ಲಿಗೆ ಚಪ್ಪರವ ದಾರಿ ಯುದ್ದಕ್ಕೂ ಹಾಸಿದ್ದೇನೆ ನೀ ಎಲ್ಲಿದ್ದರೂ ಬಂದು ಬಿಡು ಉಸಿರು ನಿಲ್ಲುವ ತನಕ ನಿನ್ನದೊಂದೇ ಹೆಸರು ಎದೆಯೊಳಗೆ, ಈ ಮುನಿಸು ತರವಲ್ಲ, ಹಠ ತೊರೆದು ಒಲವ ಹರಿಸಲು ನೀ ಎಲ್ಲಿದ್ದರೂ ಬಂದು ಬಿಡು.
- ಸಂಜೆಯಾಗಸದಲ್ಲಿ ಬಹುವರ್ಣದ ಕಾರಂಜಿ ಚಿಮ್ಮಿದೆ. ಬಣ್ಣವನ್ನೆಲ್ಲಾ ಕದ್ದು ಮನದೊಳಗೆ ನಿನ್ನ ಚಿತ್ರ ಮೂಡಿಸಿದ್ದೇನೆ. ನಿನ್ನ ಬೆರಳ ತುದಿಯ ನವಿರು ಸ್ಪರ್ಶದ ಬಿಸಿಗೆ ಎದೆಯ ಹಿಮ ಕರಗುತ್ತಿದೆ. ಬಿಸಿನೀರ ಬುಗ್ಗೆಯಲ್ಲಿ ಐರಾವತವನ್ನೇರಿ ‘ಸಿರಿ’ ಸಗ್ಗದಸವಾರಿ ಹೊರಟಿದ್ದೇನೆ.
- ಮಾತೇನೂ ಬೇಡ, ನಾಲ್ಕೇ ನಾಲ್ಕು ಹೆಜ್ಜೆಯ ಪಯಣ. ಕೈ ಕೈ ಹಿಡಿದು, ಜೊತೆಯಾಗಿ ನಡೆದು ಬಿಡೋಣ. ಮಾತು ಮುನಿಸು, ಪ್ರೀತಿ ವಿರಹ ಏನಿದ್ದರೂ ಸರಿ. ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ಸಿರಿಯ ಹಂಚಿ ಉಣ್ಣೋಣ.
ಇಂತಹ ಇನ್ನಷ್ಟು ಗಜಲ್ ಗಳನ್ನು ಸವಿಯಲು ಪುಸ್ತಕವನ್ನು ಓದಿರಿ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
