‘ಬದುಕು ಕ್ಷಣಿಕ’ ಕವನ – ಡಾ. ಸಿದ್ದು ಸಾವಳಸಂಗ

ತಗ್ಗಿ-ಬಗ್ಗಿ ಬಾಳಿದರೆ ಬಾಳಿಗೊಂದು ಬೆಲೆ !… ಕವಿ ಡಾ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಬದುಕು ಕ್ಷಣಿಕ
ನೀರ ಮೇಲಿನ ಗುಳ್ಳೆ !

ನಿನ್ನೆ ಇದ್ದವರು ಇಂದಿಲ್ಲ
ಅಹಂಮಿಕೆ ಬಿಟ್ಟುಬಿಡಿ !

ಎಲ್ಲರೂ ನನ್ನವರೆಂದೇ ಭಾವಿಸಿಬಿಡಿ
ಕಾಲಕ್ಕೆ ರೆಕ್ಕೆಗಳಿವೆ !

ಅದು ವೇಗವಾಗಿ ಹಾರುತ್ತದೆ
ಸಿರಿತನ-ಬಡತನ
ಪ್ರಶಸ್ತಿ-ಪುರಸ್ಕಾರ
ಮೇಲು-ಕೀಳು
ಎಲ್ಲವೂ ಅಶಾಶ್ವತ !

ಇರುವಷ್ಟುದಿನ
ಹೊಂದಿಕೊಂಡು ಬಾಳಿ !

ಕಾಲನ ಕರೆ ಯಾರಿಗೆ
ಯಾವಾಗ ಬರುತ್ತದೆಯೋ ಗೊತ್ತಿಲ್ಲ !

ಹೋದಮೇಲೆ
ನೀವು ಮಾಡಿದ ಒಳ್ಳೆಯ
ಕಾರ್ಯಗಳಷ್ಟೇ ಉಳಿಯುತ್ತವೆ !

ಆಗಸವನ್ನು ನೋಡದೆ
ನೆಲವನ್ನು ನೋಡಿ ನಡೆಯಿರಿ !

ತಗ್ಗಿ-ಬಗ್ಗಿ ಬಾಳಿದರೆ
ಬಾಳಿಗೊಂದು ಬೆಲೆ !

ಇಲ್ಲದಿರೆ…
ಬದುಕನ್ನು ನೀವು
ಮಾಡಿದಂತೆ ಕೊಲೆ !!


  • ಡಾ. ಸಿದ್ದು ಸಾವಳಸಂಗ, ತಾಜಪುರ ( ಕಾವ್ಯನಾಮ – ಚಿರಂಜೀವಿ ) ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು, ವಿಜಯಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW