‘ಬಳಗ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



ಒಂದು ಬಳಗ ಹೇಗಿರಬೇಕು ಎನ್ನುವುದನ್ನು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಸುಂದರವಾಗಿ ಕವಿತೆಯಲ್ಲಿ ಹೇಳಿದ್ದಾರೆ. ಅಗುಳ ಕಂಡರೆ ಬಳಿಗೆ ಕರೆಯುವ ಕಾಗೆಗಳ ಬಳಗದಂತಿರಬೇಕು ಸುಂದರ ಸಾಲುಗಳೊಂದಿಗೆ ಓದುಗರಿಗಾಗಿ ಸುಂದರ ಕವಿತೆ.ಮುಂದೆ ಓದಿ…

#ಬಳಗವಿರಬೇಕು ಕೊಳಗದಷ್ಟು
ಹಗೆ ಇಲ್ಲದೆ ನಗೆ ಬೀರುತಿರಬೇಕು
ಕಷ್ಟದಲಿ ಇಷ್ಟದಿಂದಪ್ಪುವ
ಮುಷ್ಟಿಹೃದಯ ತುಷ್ಟವಾಗಬೇಕು

#ಅಕ್ಕರೆಯಲಿ ಸಕ್ಕರೆಯಂತಿಹ
ಸೊಕ್ಕಿಲದೆ ಹಕ್ಕಿಯಂತಿರಬೇಕು
ದುಷ್ಟರಾಗದೆ ಕಷ್ಟದಲಾಗುವ
ಇಷ್ಟಪಡುವ ಪುಷ್ಟರಾಗಬೇಕು

ಸಂಬಂಧದಲ್ಲಿ ಬಂದಿಯಾಗಿ
ಗಂಧದಂತೆ #ಸುಗಂಧವಿರಬೇಕು
ಅಳಿವು ಬಂದಾಗ ಉಳಿಸಲೆನಿಸುವ
ಇಳೆಗೆ ಬೀಳುವ ಮಳೆಯಾಗಬೇಕು

ಅಗುಳ ಕಂಡರೆ ಬಳಿಗೆ ಕರೆಯುವ
ಕಾಗೆಗಳ ಬಳಗದಂತಿರಬೇಕು
ಹೊಗಳಿ ಅಟ್ಟಕೇರಿಸದೆ ತೆಗಳಿ
ಮನದ ಹುಳುಕ ತೆಗೆವಂತಿರಬೇಕು

ಕತ್ತಲಲ್ಲಿ ಬೆಳಕಾಗಿದ್ದು
ಹಿತ್ತಲ ಮದ್ದಿನಂತೆ ಜೊತೆಗಿರಬೇಕು
ಭ್ರಷ್ಟನು ನಿಕೃಷ್ಟನಾಗದೆ
ಉತ್ಕೃಷ್ಟ ಬಂಧುವಾಗಬೇಕು.


  • ಚನ್ನಕೇಶವ ಜಿ ಲಾಳನಕಟ್ಟೆ  (ಕವಿಗಳು, ಲೇಖಕರು) ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW