ಆನಂದಪುರಂದಲ್ಲಿ ಸಾಂಗ್ಲಿಯಾನ …- ಅರುಣ್ ಪ್ರಸಾದ್

ಹೆಚ್.ಟಿ.ಸಾಂಗ್ಲಿಯಾನ ಅಂದರೆ ಎಲ್ಲರಿಗೂ ನೆನಪಾಗುವುದು ಕನ್ನಡ ಚಲನ ಚಿತ್ರರಂಗದಲ್ಲಿ ಅವರ ಹೆಸರಲ್ಲಿ ಬಂದ ಮೂರು ಹಿಟ್ ಸಿನಿಮಾಗಳು. ಆದರೆ ಆನಂದಪುರಂ ಜನತೆಗೆ ಸಾಂಗ್ಲಿಯಾನರ ಪರಿಚಯವೇ ಬೇರೆ ಕೋನದಲ್ಲಿದೆ. ಲೇಖಕರಾದ ಅರುಣ್ ಪ್ರಸಾದ್ ಅವರ ನೆನಪಿನ ಸುರಳಿಯಲ್ಲಿ ಹೆಚ್.ಟಿ.ಸಾಂಗ್ಲಿಯಾನ ಕುರಿತು ತಪ್ಪದೆ ಓದಿ…

1 ಜುಲೈ 1943 ರಲ್ಲಿ ಈಗಿನ ಮಿಜೋರಾಂ ರಾಜಧಾನಿ ಅಜ್ವಾಲ್ ನಲ್ಲಿ ಜನಿಸಿ, ಮೇಘಾಲಯದ ಸೆಂಟ್ ಎಡ್ಮಂಡ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಐಪಿಎಸ್ ಉತ್ತೀರ್ಣರಾಗಿ 1968 ರಲ್ಲಿ ಕರ್ನಾಟಕ ಕೇಡರ್ ಆಗಿ ರಾಜ್ಯದ ಕರಾವಳಿಯ ವಿವಿಧ ಠಾಣೆಗಳಲ್ಲಿ ಪ್ರೊಬೆಷನರಿ ಹುದ್ದೆ ನಿರ್ವಹಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಡಿವೈಎಸ್ಪಿ (ASP) ಪ್ರಥಮ ಹುದ್ದೆ ಸ್ವೀಕರಿಸಿದ್ದು ಇತಿಹಾಸ. ಆಗ ಸಾಗರ ಡಿವೈಎಸ್ಪಿ ವ್ಯಾಪ್ತಿ ಶಿವಮೊಗ್ಗದ ಅರ್ಧ ಜಿಲ್ಲೆ ಅಂದರೆ ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀಥ೯ಹಳ್ಳಿ ತಾಲ್ಲೂಕ್ ಸೇರಿತ್ತು.

This slideshow requires JavaScript.

 

ಫೋಟೋ ಕೃಪೆ : ಫೇಸ್ಬುಕ್

1978 ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸಾಂಗ್ಲಿಯಾನ ಇದ್ದರು.
1972 – 73 ರಲ್ಲಿ ಪೋಲಿಸ್ ಜೀಪೊಂದು ಆನಂದಪುರದ ಎರಡೂ ಕೆರೆ ದಂಡೆ ಮೇಲೆ ನಿಲ್ಲುತ್ತಿತ್ತು. ಜೀಪಲ್ಲಿ ಕುಳಿತಿದ್ದೇ ತರುಣ ಪೋಲಿಸ್ ಸಮವಸ್ತ್ರದಾರಿ ತನ್ನ ರೈಪಲ್ಲಿನಿಂದ ಕೆರೆ ಮಧ್ಯದಲ್ಲಿರುತ್ತಿದ್ದ ಕಡು ನೀಲಿ ಮೈಬಣ್ಣದ ಕೆಂಪು ಕುಕ್ಕಿನ ನೀರ ಕೋಳಿ (ರಾಮ ಕೋಳಿ) ಗೆ ಗುರಿ ಇಟ್ಟು ತನ್ನ ರೈಪಲ್ಲಿನಿಂದ ಹತ್ತಾರು ಹಕ್ಕಿ ಹೊಡೆಯುತ್ತಿದ್ದರು. ಇದನ್ನು ನೋಡಲು ನೆರೆಯುತ್ತಿದ್ದ ಸ್ಥಳೀಯರು ಶಿಕಾರಿ ಮಾಡಿದ ಹಕ್ಕಿ ಕೆರೆಗೆ ಇಳಿದು ತೆಗೆದು ತಂದು ಕೊಡುತ್ತಿದ್ದರು. ಅದರಲ್ಲಿ ನಾಲ್ಕಾರು ಮಾತ್ರ ತೆಗೆದುಕೊಂಡು ಉಳಿದದ್ದು ತಂದವನಿಗೆ ಕೊಡುತ್ತಿದ್ದರು ಮತ್ತು ಅವನ ಶ್ರಮಕ್ಕೆ ಆ ಕಾಲದಲ್ಲಿ ಭಕ್ಷೀಸು ಬೇರೆ.

ಆಗೆಲ್ಲ ಇವರು ನಡೆಸುತ್ತಿದ್ದ ತನಿಖೆ ಎಂದರೆ ಕಳ್ಳತನ ಮಾಡಿದ ಕಳ್ಳ, ಕೊಲೆಗಾರ ತಕ್ಷಣ ಇವರ ಬಂಧನಕ್ಕೆ ಒಳಗಾಗುವಂತ ಚಾಕ ಚಕ್ಯತೆ ಇವರದ್ದು, ಹಾಗಾಗಿ ಇವರ ವ್ಯಾಪ್ತಿಯಲ್ಲಿ ಅವರ ಅವಧಿಯಲ್ಲಿ ಕಳ್ಳತನ ಮತ್ತು ಕೊಲೆ ಪ್ರಕರಣಗಳು ಅತ್ಯಂತ ಕಡಿಮೆ ಆಗಿತ್ತು.

ಮಲೆನಾಡಿನ ಟಿಂಬರ್ ಮಾಫಿಯಾದ ಲಾರಿಗಳನ್ನು ಇವರು ಪೋಲಿಸ್ ಜೀಪಿನಲ್ಲಿ ಚೇಸ್ ಮಾಡಿದ್ದು, ಆನಂದಪುರಂ ಆಸ್ಪತ್ರೆ ಎದುರು ಟಿಂಬರ್ ಲಾರಿ ಟೈರ್ ಗೆ ಶೂಟ್ ಮಾಡಿ ಹಿಡಿದಿದ್ದು ಒ0ದು ರೀತಿ ಜೇಮ್ಸ್ ಬಾಂಡ್ ಸಿನಿಮಾದಂತೆ ಇತ್ತು. ಆಗ ಆನಂದಪುರಂದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಆಗಿನ ಶಿಸ್ತಿನ ದೈಹಿಕ ಶಿಕ್ಷಕರಾದ ಸೇವಾದಳದ ಎಸ್.ಆರ್.ಕೃಷ್ಣಪ್ಪರ ಪ್ರಭಾತ್ ಪೇರಿಗಳು ಸಾಂಗ್ಲಿಯಾನರ ಮೆಚ್ಚುಗೆಗೆ ಕಾರಣ ಆಗಿತ್ತು. ರಾಷ್ಟ್ರೀಯ ಹಬ್ಬದ ಪ್ರಬಾತ್ ಪೇರಿ ನಂತರದ ಗಾರ್ಡ್ ಆಪ್ ಹಾನರ್ ಸ್ವೀಕರಿಸಿ ರಾಷ್ಟ್ರ ಧ್ವಜಾರೋಹಣ ಸಾಂಗ್ಲಿಯಾನರು ನೆರವೇರಿಸಿ ನಂತರ ಭಾಗವಹಿಸುವ ವಿದ್ಯಾರ್ಥಿ ವೃಂದ ಮತ್ತು ಈ ಅದ್ದೂರಿ ಪ್ರಬಾತ್ ಪೇರಿ ಮತ್ತು ಸಾಂಗ್ಲಿಯಾನರನ್ನು ನೋಡಲು ನೆರೆಯುತ್ತಿದ್ದ ಸಾವಿರಾರು ಆನಂದಪುರಂ ನಿವಾಸಿಗಳನ್ನು ಉದ್ದೇಶಿಸಿ ಸಾಂಗ್ಲಿಯಾನರು ಮಾಡುತ್ತಿದ್ದ ಭಾಷಣ ಅದನ್ನು ಯಥಾ ಅನುವಾದಿಸುತ್ತಿದ್ದ ಎಸ್ ಆರ್ ಕೆ ಅವರ ಕಂಚಿನ ಕಂಠ ಈಗಲೂ ನೆನಸಿಕೊಂಡರೆ ರೋಮಾಂಚನವೇ ಹಾಗಾಗಿ ಆನಂದಪುರಂ ಜನತೆಗೆ ಸಾಂಗ್ಲಿಯಾನ ಅಂದರೆ ಪ್ರೀತಿ ಮತ್ತು ಸಾಂಗ್ಗಿಯಾನರಿಗೂ ಈಗಲೂ ಆನಂದಪುರಂವೆಂದರೆ ಆಷ್ಟೇ ಅಭಿಮಾನ.

ಸಾಂಗ್ಲಿಯಾನ ಕುಟುಂಬ (ಫೋಟೋ ಕೃಪೆ : facebook)

ಆಗೆಲ್ಲ ಬಿಡಾಡಿ ದನಗಳು ಜಿಲ್ಲಾ ಕೇಂದ್ರ ತಾಲ್ಲೂಕ್ ಕೇಂದ್ರದಲ್ಲಿ ಬೀದಿ ತುಂಬಾ ಓಡಾಡಿಕೊಂಡಿರುತ್ತಿದ್ದವು. ಇದರಿಂದ ಅಪಘಾತ ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸುವುದು ಅಸಾಧ್ಯ ಅಂತ ತೀಮಾ೯ನವಾಗಿದ್ದ ಕಾಲದಲ್ಲಿ ಸಾಂಗ್ಲಿಯಾನ ಸ್ವತಃ ಬಿಡಾಡಿ ದನಗಳನ್ನು ಹಿಡಿದು ದೊಡ್ಡಿಗೆ ಸೇರಿಸಿದಾಗ ಬಿಡಿಸಿಕೊಳ್ಳಲು ಬಂದ ಮಾಲೀಕರಿಗೆ ಖಡಕ್ ವಾರ್ನಿಂಗ್ ಮಾಡಿ ಬಿಡಾಡಿ ದನದ ಸಮಸ್ಯೆ ಬಗೆಹರಿಸಿದ್ದರು.

ಬೆಂಗಳೂರು ಪೋಲಿಸ್ ಕಮಿಷನರ್, ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಆಗಿ ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ. ಸಾಂಗ್ಲಿಯಾನ ಇವರ ಪತ್ನಿ ಹೆಸರು ಸಿ. ರೋದನ್ ಪುಯಿ ಈ ದಂಪತಿಗಳಿಗೆ ನಾಲ್ಕು ಪುತ್ರಿಯರು ಸಾರಾ, ರೆಬೆಕಾ, ಎಲಿಜಾಬೆತ್ ಮತ್ತು ರಚೆಲ್ .

14ನೇ ಲೋಕಸಭೆಗೆ ಬಿಜೆಪಿಯಿಂದ ಬೆಂಗಳೂರಿಂದ ಆಯ್ಕೆ ಆಗಿದ್ದರು, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾದ್ಯಕ್ಷರೂ ಆಗಿದ್ದರು.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW