ಚಿಮುಣಿ ದೀಪ, ಕತ್ತಲಿನ ಅನುಭವ ಇಂದಿನ ಬಹುತೇಕ ಪೀಳಿಗೆಗೆ ಇಲ್ಲ. ಆದರೆ ಅದೊಂದು ದಿನ ಚಿಮುಣಿ ಬೆಳಕಿನಲ್ಲಿ ಓದಿದ ನೆನಪುಗಳು, ಆ ಬೆಳಕಿನಡಿಯಲ್ಲಿ ಮನೆಯವರೆಲ್ಲ ಒಟ್ಟಿಗೆ ಕೂತು ಊಟ ಮಾಡಿದ ದಿನಗಳನ್ನು’ಚಿಮುಣಿ ದೀಪ’ ಕವನ ಮತ್ತೆ ಮೆಲಕು ಹಾಕಿತು. ಕವಿಯತ್ರಿ ಕಲ್ಪಾ ಸಿ. ಎನ್ ಅವರ ಕವನವನ್ನುಓದಿ. ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಧೂ ಮಳೆಯ ನಡುವೆ ಕವಿದಿರುವ
ಕತ್ತಲು…
ಹೊಡೆದೋಡಿಸಲಿರುವ ಮಲೆನಾಡಿಗರ
ಈ ಕಂದೀಲು…
ಜ್ಞಾನಾರ್ಜನೆಗೆ ಆಸರೆ ದೀಪದ
ಈ ಬಟ್ಟಲು…
ಅಘ್ರಾಣಿಸಿದವರಿಗಷ್ಟೇ ಗೊತ್ತು ಸೀಮೆಎಣ್ಣೆಯ
ಘಮಲು…
ಇದರ ಸುತ್ತ ಕುಳಿತಾಗ ತೆರೆಯುವುದು ನಾನಾ ಕಥೆಯ
ಬಾಗಿಲು…
ತೂಗುವುದು ಒಮ್ಮೊಮ್ಮೆ ಹೀಗೆ ಚಿಮುಣಿ ದೀಪದ ನೆನಪಿನ
ತೊಟ್ಟಿಲು…
- ಕಲ್ಪ ಸಿ. ಎನ್
(ಕನ್ನಡದ ಟಿ- ಶರ್ಟ್, ಕತೆ, ಕಾದಂಬರಿ ಇತರೆ ಪುಸ್ತಕಗಳನ್ನು ಇಲ್ಲಿ ಖರೀದಿಸಬಹುದು- ಖರೀದಿಸಿ)