ಹೊಸ ವರ್ಷ ಎಂಬ ಕಾಲ ಮಾಪನ

ಕವಿ ಆನಂದ್ ಋಗ್ವೇದಿ ಅವರು ಹೊಸ ವರ್ಷಕ್ಕೆ ಬರೆದ ಹೊಸ ಕವಿತೆಯ ಸಾಲುಗಳನ್ನು ತಪ್ಪದೆ ಮುಂದೆ ಓದಿ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು…

ನಿನ್ನೆಗಳ ನೆನಪು
ನಾಳೆಗಳ ಕನಸಿನ ನಡುವೆ
ಇಂದು ಈ ವರ್ತಮಾನ

ಕಾಲಾತೀತ ವಿಶ್ವದ
ಕಾಲಬದ್ಧ ಚಲನೆಯ ಹೊತ್ತು
ಈ ಹೊತ್ತು ತಂದಿದೆ ಈ
ದಿನಮಾನ

ಗ್ರೆಗೋರಿಯನ್
ಈಜಿಪ್ಟಿಯನ್
ರೋಮನ್…
ಹೀಗೇ ಮಾಪನಗಳು ರೂಪಿಸಿದ
ಕ್ಯಾಲೆಂಡರ್ ನಮ್ಮ
ಕ್ರಿಸ್ತನ ನಿರ್ಗಮನದ ನಂತರ

ಲೆಕ್ಕ ಹಾಕಿದ ಈ ದಿನ :

ಎರಡನೆಯ ಪರದ ಅರ್ಧದಲ್ಲಿ
ಬಿಳಿಯ ವರಾಹದ ಕಲ್ಪದಲ್ಲಿ
ವಿವಸ್ವತನ ಮನ್ವಂತರದಲ್ಲಿ
ಕಲಿಯುಗದ ಮೊದಲ ಪಾದದಲ್ಲಿ
ಈ ದೇಶದ ಪ್ರದೇಶದ ಈ ನೆಲದಲ್ಲಿ
ಈ ಹೊತ್ತು ಶುಭವ ಹೊತ್ತು ತರಲಿ
ಎಂಬುದು ಆರ್ಷೇಯ ಮತ್ತು ಆಶಯ

ಅವರ ಇವರ ನಮ್ಮವರ
ಅವರವರ ಅನವರತ ಎಲ್ಲರ
ದಿನಮಾನಗಳಲ್ಲಿ ದಿನಮಣಿ
ಉದಯಿಸಿ ದಿನವ ಹೊಳೆಯಿಸಿ
ಆಶಯಗಳ ಈಡೇರಿಸಲಿ ಎಂಬುದು-
ವಿಶ್ವ ಮಾನವ ತತ್ವ

ಈ ಹೊಸ ವರ್ಷ
ನಿಮ್ಮ ಕನಸುಗಳ ನನಸು
ಮಾಡಲೆಂದು ಹಾರಯಿಸುವುದು-
ವಿಶ್ವ ಮಾನವತ್ವ

ಹೊಸ ವರ್ಷದ ಹಾರ್ದಿಕ ಶುಭಾಶಯಗಳು


  • ಆನಂದ್ ಋಗ್ವೇದಿ – ದಾವಣಗೆರೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading