ಅಪ್ಪ ‘ನಾಲ್ಕು ಹನಿಗವಿತೆಗಳು’

ಕನಸ್ಸುಗಳಿಗೆ ನೀರೆರೆಯುವ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು…ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಬಾಲ್ಯದಲಿ
ಅಪ್ಪನ ಹೆಗಲ ಮೇಲೆ
ನಾನು
ಈಗ ಮನದಲಿ
ಅವನ ನೆನಪುಗಳ
ಥಾನು!

***

ಗದರುತಿದ್ದರೂ ಅಪ್ಪ
ಮನದ ಮೂಲೆಯಲಿ
ಮರುಗುತಿದ್ದ
ಎಷ್ಟೇ ಸಂಕಷ್ಟ ಬಂದರೂ
ಲಂಚಕೆ ಕೈ ಒಡ್ಡದೆ
ನಿಯತ್ತಿನಲೇ ಬದುಕು ಗೆದ್ದ!

***

ಹಗಲೆಲ್ಲ ಆಫೀಸಿನಲಿ
ನಮಗಾಗಿ
ದುಡಿಯುತಿದ್ದ
ಸಂಜೆ ಮಠದಲ್ಲಿ
ರಾಯರಿಗಾಗಿ
ಗಂಧ ತೇಯುತ್ತಿದ್ದ!

***

ಹಲವರಿಗೆ
ದೇವರು
ತಿರುಪತಿಯ ತಿಮ್ಮಪ್ಪ
ನನಗೆ
ನಮ್ಮನೆಯ
ಅಪ್ಪ!


  • ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW