‘ಸಿರಿ ಲಕುಮಿ’ ಕವನ : ಚನ್ನಕೇಶವ ಜಿ ಲಾಳನಕಟ್ಟೆ

ಬಡವಗು ಸಿರಿಯನು ಮೊಗೆಮೊಗೆದೆರೆಯಲು ಅಡೆತಡೆ ಕರಗಿಸಿ ಬಾ ಮನೆಗೆ ಸಿರಿವರಲಕುಮಿಯೆ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ನಂಬಿದೆ ನಿನ್ನನು ಸಿರಿವರಲಕುಮಿಯೆ
ಅಂಬುಜವಾಸಿಯೆ ಬಾ ಮನೆಗೆ
ಹಂಬಲಿಸಿರುವೆನು ಶ್ರೀ ಹರಿವಲ್ಲಭೆ
ಅಂಬುಜ ನಯನೆ‌ಯೆ ಬಾ ಮನೆಗೆ

ನಂಬಿಕೆಯೊಳು ನಾ ನಿನ್ನನು ನುತಿಸುವೆ
ಅಂಬರದಗಲ ಸಿರಿಯೆರೆಯೆ
ಕುಂಭದಿ ಕೂರಿಸಿ ಸಿಂಗರಿಸಿರುವೆನು
ತಂಬಿಗೆ ಪಾಯಸ ನೀ ಕುಡಿಯೆ

ದಡದಡ ಅಡಿಯಿಡುತಲಿ ನೀ ಬುವಿಯೊಳು
ಸಡಗರದಿಂದಲಿ ಬಾ ಮನೆಗೆ
ಬಡವಗು ಸಿರಿಯನು ಮೊಗೆಮೊಗೆದೆರೆಯಲು
ಅಡೆತಡೆ ಕರಗಿಸಿ ಬಾ ಮನೆಗೆ

ಕರೆಕರೆದವರಿಗೆ ನೀ ನೆರವಾಗುತ
ಪರಿಹರಿಸುತ ಕಡುಕಷ್ಟವನು
ಧರೆಯೊಳಗೀದಿನ ವರಗಳನೆರೆಯುತ
ಪೊರೆ ನರಮನುಜನ ಜನುಮವನು.


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading