ಏಕಾದಶಿಯಂದೇ ವೈಕುಂಠ ದ್ವಾರ ತೆರೆಯುವುದೇಕೆ?

ವೈಕುಂಠ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ಪವಿತ್ರ ದಿನವಾಗಿದ್ದು, ಈ ದಿನದ ಉಪವಾಸವಿದ್ದು ಪೂಜೆ ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ಹೋಟೆಲ್ ಉದ್ಯಮಿ ಹಾಗೂ ಲೇಖಕರಾದ ಅರುಣ್ ಪ್ರಸಾದ್ ಅವರು ಬರೆದ ವೈಕುಂಠ ಏಕಾದಶಿ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ವೈಕುಂಠ ಮತ್ತು ಸ್ವರ್ಗ ಎರಡೂ ದೈವಿಕ ಲೋಕಗಳಾಗಿದ್ದರೂ ಅವುಗಳು ವಿಭಿನ್ನವಾಗಿವೆ. ಸ್ವರ್ಗವು ತಾತ್ಕಾಲಿಕವಾಗಿದ್ದು, ಪುಣ್ಯದ ಫಲವನು ಅನುಭವಿಸಿದ ನಂತರ ಆತ್ಮಗಳು ಪುನರ್ಜನ್ಮ ಪಡೆಯುತ್ತವೆ. ಆದರೆ ವೈಕುಂಠವು ಶಾಶ್ವತವಾದ ಆಧ್ಯಾತ್ಮಿಕ ಕ್ಷೇತ್ರ, ವಿಷ್ಣುವಿನ ನಿವಾಸ ಮತ್ತು ಮೋಕ್ಷವನ್ನು ನೀಡುತ್ತದೆ. ಅಲ್ಲಿ ಆತ್ಮಗಳು ಜನನ-ಮರಣ ಚಕ್ರದಿಂದ ಮುಕ್ತವಾಗಿವೆ.

ಸ್ವರ್ಗದಲ್ಲಿ ಇಂದ್ರನಂತಹ ದೇವತೆಗಳು ಮತ್ತು ಇಂದ್ರಿಯ ಸುಖಗಳಿದ್ದರೆ, ವೈಕುಂಠವು ಪೂರ್ಣ ಶಾಂತಿ, ಜ್ಞಾನ ಮತ್ತು ಭಗವಂತನೊಂದಿಗಿನ ಶಾಶ್ವತ ಸಂಬಂಧದ ತಾಣವಾಗಿದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮದ ದ್ವಾರ ಇವತ್ತು ತೆರೆಯಲ್ಪಡುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದ ಆಚರಣೆಯಲ್ಲಿದೆ. ಈ ದಿನದ ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ.

ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ. ವೈಕುಂಠವನ್ನು ವಿಷ್ಣುಲೋಕ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ವೈಷ್ಣವ ಸಂಪ್ರದಾಯದಲ್ಲಿ ಸರ್ವೋಚ್ಚ ದೇವತೆಯಾದ ವಿಷ್ಣುವಿನ ವಾಸಸ್ಥಾನವಾಗಿದೆ ವಿಷ್ಲುವಿನ ಪತ್ನಿ ಲಕ್ಷ್ಮಿಪಂಥದ ಸರ್ವೋಚ್ಚ ದೇವತೆ. ರಾಮಾನುಜರ ಪ್ರಕಾರ ವೈಕುಂಠವು ಪರಮ ಪದ ಅಥವಾ ನಿತ್ಯ ವಿಭೂತಿ ಒಂದು “ಶಾಶ್ವತ ಸ್ವರ್ಗೀಯ ಲೋಕ”, ಮತ್ತು ಇದು “ದೇವರ ವಾಸಸ್ಥಾನವಾದ ದೈವಿಕ ಅವಿನಾಶಿ ಜಗತ್ತು”. ವೈಷ್ಣವ ಸಾಹಿತ್ಯದಲ್ಲಿ ವೈಕುಂಠವನ್ನು ಹದಿನಾಲ್ಕು ಲೋಕಗಳ (ಲೋಕಗಳು) ಮೇಲಿನ ಅತ್ಯುನ್ನತ ಕ್ಷೇತ್ರವೆಂದು ಮತ್ತು ವಿಷ್ಣುವಿನ ಭಕ್ತರು ಮುಕ್ತಿಯನ್ನು ಸಾಧಿಸುವ ಸ್ಥಳವೆಂದು ವಿವರಿಸಲಾಗಿದೆ.

ಫೋಟೋ ಕೃಪೆ : ಅಂತರ್ಜಾಲ

ಇದನ್ನು ಅವಳಿ ದೇವತೆಗಳಾದ  ಜಯ ಮತ್ತು  ವಿಜಯ ಎಂಬ ದ್ವಾರಪಾಲಕರು ಅಥವಾ ವೈಕುಂಠದ ದ್ವಾರಪಾಲಕರು ಕಾವಲು ಕಾಯುತ್ತಾರೆ. ವೈಕುಂಠದಲ್ಲಿ ನೆಲೆಸಿರುವ ವಿಷ್ಣುವಿನ ಸೈನ್ಯವನ್ನು ವಿಶ್ವಕ್ಸೇನ ನೇತೃತ್ವ ವಹಿಸುತ್ತಾನೆ.

ವೈಕುಂಠದ ಗ್ರಹಗಳು ಚಿನ್ನದ ಅರಮನೆಗಳು ಮತ್ತು ಪರಿಮಳಯುಕ್ತ ಹಣ್ಣುಗಳು ಮತ್ತು ಹೂವುಗಳನ್ನು ಬೆಳೆಯುವ ನೇತಾಡುವ ಉದ್ಯಾನಗಳಿಂದ ತುಂಬಿವೆ ಎಂದು ವಿವರಿಸಲಾಗಿದೆ.
ವೈಕುಂಠ ಗ್ರಹಗಳು ಸತ್ಯಲೋಕದಿಂದ 26,200,000 ಯೋಜನೆಗಳಿಂದ (209,600,000 ಮೈಲುಗಳು) ಪ್ರಾರಂಭವಾಗುತ್ತವೆ ಇದು ಭೌತಿಕ ದೂರವನ್ನು ಉಲ್ಲೇಖಿಸುವುದಿಲ್ಲ.
ಅಸ್ತಿತ್ವದಲ್ಲಿರುವ ಹೆಚ್ಚಿನ ಪುರಾಣಗಳು ಮತ್ತು ವೈಷ್ಣವ ಸಂಪ್ರದಾಯಗಳಲ್ಲಿ ವೈಕುಂಠವು ಮಕರ ರಾಶಿಯ ದಿಕ್ಕಿನಲ್ಲಿದೆ.

ಇದು ಮಕರ ರಾಶಿಗೆ ಅನುರೂಪವಾಗಿದೆ. ವಿಶ್ವವಿಜ್ಞಾನದ ಒಂದು ಆವೃತ್ತಿಯು ವಿಷ್ಣುವಿನ ಕಣ್ಣು ದಕ್ಷಿಣ ಆಕಾಶ ಧ್ರುವದಲ್ಲಿದೆ ಅಲ್ಲಿಂದ ಅವನು ಬ್ರಹ್ಮಾಂಡವನ್ನು ವೀಕ್ಷಿಸುತ್ತಾನೆ ಎಂದು ಹೇಳುತ್ತದೆ. ವೈಕುಂಠ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ಪವಿತ್ರ ದಿನವಾಗಿದ್ದು, ಈ ದಿನದ ಉಪವಾಸವಿದ್ದು ಪೂಜೆ ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ.

ವೈಕುಂಠ ಏಕಾದಶಿ ವ್ರತ ಆಚರಿಸುವುದರಿಂದ, ಜನನ-ಮರಣ ಚಕ್ರದಿಂದ ಮುಕ್ತಿ, ಮೋಕ್ಷ ನೀಡಿ, ವೈಕುಂಠದಲ್ಲಿ ಸ್ಥಾನ ಲಭಿಸುತ್ತದೆ. ಇದನ್ನು ‘ಮೋಕ್ಷ ಏಕಾದಶಿ’ ಎಂದೂ ಪ್ರಸಿದ್ಧವಾಗಿದೆ, ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ವಿಷ್ಣುವಿನ ಅನುಗ್ರಹ ಪಡೆಯಲು ಸಹಕಾರಿ ಎಂದು ನಂಬಲಾಗಿದೆ.

ದೇಶದಾದ್ಯಂತ ಹಿಂದೂಗಳು ಈ ಪವಿತ್ರ ದಿನವನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಯೊಂದು ವಿಷ್ಣು ದೇವನ ದೇವಾಲಯದಲ್ಲೂ ವೈಕುಂಠ ಏಕಾದಶಿ ದಿನದಂದು ವಿಶೇಷ ಪ್ರಾರ್ಥನೆ, ಪೂಜೆ – ಪುನಸ್ಕಾರಗಳು, ಯಜ್ಞಗಳು, ಪ್ರವಚನೆ ಹಾಗೂ ವಿವಿಧ ರೀತಿಯಾದ ಧಾರ್ಮಿಕ ಆವಚರಣೆಗಳನ್ನು ನಡೆಸಲಾಗುತ್ತದೆ.
ಈ ದಿನ ವೈಕುಂಠದ ದ್ವಾರವನ್ನು ನಿರ್ಮಿಸಿ, ವೃತವನ್ನು ಆಚರಿಸುವ ಪದ್ಧತಿ ಇದೆ.

ಫೋಟೋ ಕೃಪೆ : ಅಂತರ್ಜಾಲ

ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ ಮತ್ತು ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮವನ್ನು ಸೇರಬಹುದು. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ.

ಈ ದಿನ ವಿಷ್ಣುವಿನ ವೈಕುಂಠ ಧಾಮದ ಬಾಗಿಲುಗಳು ಭಕ್ತರಿಗೆ ತೆರೆದಿರುತ್ತವೆ ಎಂದು ನಂಬಿಕೆ, ಆದ್ದರಿಂದಲೇ ಇದನ್ನು ‘ವೈಕುಂಠ ಏಕಾದಶಿ’ ಎನ್ನುತ್ತಾರೆ. ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿ ಈ ಮಾಸದ (ಮಾರ್ಗಶಿರ) ಮಹತ್ವವನ್ನು ಹೇಳಿದ್ದಾನೆ. ಪದ್ಮ ಪುರಾಣದ ಪ್ರಕಾರ, ಈ ದಿನ ಮುರಾ ಎಂಬ ರಾಕ್ಷಸನ ಸಂಹಾರದಿಂದ ‘ಏಕಾದಶಿ ದೇವಿ’ ಉದ್ಭವಿಸಿದಳು.

ಅವಳನ್ನು ಪೂಜಿಸಿದವರಿಗೆ ಮೋಕ್ಷ ಕರುಣಿಸಬೇಕೆಂದು ವಿಷ್ಣುವಿಗೆ ವರ ಬೇಡಿದಳು. ವಿಷ್ಣುವಿನ ನಾಮಸ್ಮರಣೆ ಮತ್ತು ಪ್ರಾರ್ಥನೆಗಳಿಂದ ದೈವಿಕ ಸಂಪರ್ಕ ಹೆಚ್ಚಾಗುತ್ತದೆ ಎಂಬ ಪ್ರತೀತಿಯಿದೆ. ಪುರಾಣ ಕಥೆಗಳ ಪ್ರಕಾರ ‘ಒಮ್ಮೆ ವಿಷ್ಣುವು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ.

ಬಳಿಕ ನಾನು ಯಾವ ದಿನದಂದು ವೈಕುಂಠದ ಬಾಗಿಲನ್ನು ತೆರೆಯುತ್ತೇನೆಯೋ ಆ ದಿನ ಭೂಮಂಡಲದಲ್ಲಿ ಉಪವಾಸ ಮಾಡುವ ಮನುಷ್ಯ ವೈಕುಂಠಕ್ಕೆ ಬರಲು ಅರ್ಹನಾಗುತ್ತಾನೆ’ ಎಂಬ ಸಂದೇಶ ನೀಡಿದರು ಎಂಬ ನಂಬಿಕೆ ಇದೆ. ಇದು ಮೋಕ್ಷದ ಸಂಕೇತ, ಇದು ಅಂತರಂಗ ಶುದ್ಧಿಯ ಕರೆ. ಪುರಾಣಗಳ ಪ್ರಕಾರ ಈ ದಿನ ಭಗವಂತನು ಭಕ್ತರಿಗೆ ಹೀಗೆ ಅನುಗ್ರಹಿಸಿದನೆಂದು ಹೇಳಲಾಗುತ್ತದೆ.

“ನನ್ನನ್ನು ಶ್ರದ್ಧೆಯಿಂದ ಸ್ಮರಿಸುವವರಿಗೆ ನಾನು ಸ್ವತಃ ವೈಕುಂಠದ ದಾರಿ ತೆರೆದು ಕೊಡುತ್ತೇನೆ ಎಂಬುದು ದೈವವಾಣಿ. ಅದರಂತೆ ವೈಕುಂಠ ನಮ್ಮ ಹೃದಯದಲ್ಲಿದೆ ಅಲ್ಲಿ ಇರುವ ದ್ವಾರವನ್ನು ತೆರೆಸುವುದು ಹೇಗೆ? ಅಹಂಕಾರವನ್ನು ಬಿಟ್ಟು, ಲೋಭವನ್ನು ಕಡಿಮೆ ಮಾಡಿ, ಕ್ರೋಧವನ್ನು ಶಮನಗೊಳಿಸಿ, ಭಕ್ತಿಯಿಂದ ನಾಮಸ್ಮರಣೆ ಮಾಡಿದಾಗ.. ಆ ಕ್ಷಣದಲ್ಲೇ ವೈಕುಂಠ ದ್ವಾರ ತೆರೆದಂತೆ.

ಈ ದಿನದಂದು ವಿಷ್ಣುವನ್ನು ಸ್ಮರಿಸುತ್ತಾ ಉಪವಾಸ ಮಾಡುವುದು ಪ್ರಮುಖ ಆಚರಣೆ. ಶ್ರೀಮಹಾ ವಿಷ್ಣುವಿನ ಆರಾಧನೆ, ಮಂತ್ರ ಪಠಣ, ದಾನ-ಧರ್ಮದಂತಹ ಪುಣ್ಯ ಕಾರ್ಯಗಳಲ್ಲಿ ತೊಡಗುವುದು. ಭಕ್ತಿಯಿಂದ ವಿಷ್ಣುವಿನ ನಾಮಗಳನ್ನು ಜಪಿಸುವುದು.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು, ಹೊಸನಗರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW