ಕಲ್ಬುರ್ಗಿ ಜಿಲ್ಲೆಯ ಪ್ರಪ್ರಥಮ ತನಗಾ ಸಂಕಲನ, ‘ಅಂತರಂಗದ ಪ್ರಣತಿ’ ಲೋಕಾರ್ಪಣೆಗೊಂಡಿತು, ಅದರ ವರದಿಯನ್ನು ತಪ್ಪದೆ ಮುಂದೆ ಓದಿ…
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನವು ಅನ್ನಪೂರ್ಣ ಕ್ರಾಸಲ್ಲಿ ಇರುವ ಕಲಾ ಮಂಡಳ ಸಭಾ ಭವನದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಇದರಲ್ಲಿ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭದ ಜೊತೆಗೆ ಯಡ್ರಾಮಿ ಪಟ್ಟಣದ ಉದಯೋನ್ಮುಖ ಯುವ ಬರಹಗಾರ, ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ರಚಿಸಿರುವ ಫಿಲಿಫೈನ್ ಕಾವ್ಯ ಪ್ರಕಾರವಾದ ತನಗಾ ಸಂಕಲನ ‘ಅಂತರಂಗದ ಪ್ರಣತಿ’ ಕಲ್ಬುರ್ಗಿ ಜಿಲ್ಲೆಯ ಪ್ರಪ್ರಥಮ ತನಗ ಸಂಕಲನವಾಗಿ ಲೋಕಾರ್ಪಣೆ ಮಾಡಲಾಯಿತು.

ಪುಸ್ತಕ ಕುರಿತು ಮಾತನಾಡಿದ ಸಾಹಿತಿ, ಪತ್ರಕರ್ತ, ನಟ, ನಾಟಕಕಾರರಾದ ಶ್ರೀ ಮಹಿಪಾಲರೆಡ್ಡಿ ಮುನ್ನೂರ ‘ಫಿಲಿಫೈನ್ ದೇಶದ ಟ್ಯಾಗಲೊಗ್ ಭಾಷೆಯಲ್ಲಿ ರಚಿತವಾಗಿ ಜನಪ್ರಿಯವಾದ ‘ತನಗಾ’ 7/7/7/7/ಸಿಲೆಬಲ್ ನ ಕೇವಲ ಏಳು ಉಚ್ಚಾರಾಂಶಗಳುಳ್ಳ ನಾಲ್ಕು ಸಾಲುಗಳಿಂದ ಕೂಡಿದ ತನಗ ಫಿಲಿಫೈನ್ ಕಾವ್ಯಕನ್ನಿಕೆಯನ್ನು ಡಾ.ಮಲ್ಲಿಕಾರ್ಜುನ ಆಲಮೇಲ ಯಡ್ರಾಮಿಯವರು ಬಹಳ ಅರ್ಥವತ್ತಾಗಿ ರಚಿಸಿ ಸಂಕಲನವಾಗಿ ಹೊರತರುತ್ತಿರುವದು ಅತ್ಯಂತ ಖುಷಿಯ ಸಂಗತಿ. ಅದರಲ್ಲೂ ಕಲ್ಬುರ್ಗಿ ಜಿಲ್ಲೆಯ ಪ್ರಪ್ರಥಮ ತನಗ ಸಂಕಲನ ಮತ್ತು ಇಡಿ ಕರ್ನಾಟಕದಲ್ಲಿಯೇ ಮೂರನೆಯ ತನಗ ಸಂಕಲನ ನಮ್ಮ ಜಿಲ್ಲೆಯಿಂದ ಲೋಕಾರ್ಪಣೆಯಾಗುತ್ತಿರುವದು ನಾವೆಲ್ಲ ಹೆಮ್ಮೆಪಡುವ ವಿಷಯವಾಗಿದೆ’ ಎಂದು ಸಾಹಿತ್ಯಾಸಕ್ತರು ಪುಸ್ತಕವನ್ನು ಕೊಂಡು ಓದಿ ಕೃತಿಗೆ, ಕವಿಯ ಶ್ರಮಕ್ಕೆ ಗೌರವ ಸಲ್ಲಿಸಬೇಕೆಂದು ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಷ ಬ್ರ.ಡಾ. ಸಿದ್ದಲಿಂಗ ಶಿವಾಚಾರ್ಯರು, ಹಿರೇಮಠ ಸಂಸ್ಥಾನ, ಶ್ರೀನಿವಾಸ ಸರಡಗಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅರುಣಕುಮಾರ ಪಾಟೀಲ್, ಅಧ್ಯಕ್ಷರು ಕೆಕೆ ಆರ್ ಟಿ ಸಿ, ಕಲ್ಬುರ್ಗಿಯವರು ಮಾಡಿದರು. ಪುಸ್ತಕ ಲೋಕಾರ್ಪಣೆಯನ್ನು ನವಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ದಯಾನಂದ ಮಾಡಿದರು ಮತ್ತು ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಶ್ರೀ ಕಲ್ಯಾಣ ರಾವ್ ಅಧ್ಯಕ್ಷರು ಕರವೇ ಕಲ್ಬುರ್ಗಿಯವರು ಪ್ರಧಾನ ಮಾಡಿದರು. ಮುಖ್ಯಅಥಿಗಳಾಗಿ ಕಿಶೋರ ಗಾಯಕವಾಡ, ರಾಜ್ಯ ಉಪಾಧ್ಯಕ್ಷರು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗ ಇವರುಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯರು, ಹಿರಿಯ ಸಾಹಿತಿಗಳಾದ, ಎಸ್ ಎಸ್, ಗುಬ್ಬಿಯವರು ವಹಿಸಿದ್ದರು,ಕಲ್ಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ, ಬಿ,ಹೆಚ್, ನಿರಗುಡಿ, ಮತ್ತು ಅಂತರಂಗದ ಪ್ರಣತಿ ತನಗ ಸಂಕಲನದ ಲೇಖಕರಾದ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಉಪಸ್ಥಿತರಿದ್ದರು.
- ಆಕೃತಿಕನ್ನಡ ನ್ಯೂಸ್
