‘ಯೌವನ ಕಳೆದು ಮುಪ್ಪು ಅಪ್ಪಳಿಸಿದಾಗ ಅರಿವಾಗುತ್ತದೆ’… ಶರಣಗೌಡ ಬಿ.ಪಾಟೀಲ ಲೇಖನಿಯಲ್ಲಿ ಅರಳಿದ ಕವನವನ್ನು, ತಪ್ಪದೆ ಮುಂದೆ ಓದಿ…
ಬಾಲ್ಯ ಕಳೆದು
ಅದೆಷ್ಟೋ
ವರ್ಷಗಳಾದಾಗ
ಆ ನೆನಪು
ಆಗಾಗ ಮರುಕಳಿಸಿ
ಕಣ್ಣೆದುರಿಗೆ ಬರುತ್ತದೆ!
ಯೌವನ ಕಾಲಿಟ್ಟಾಗ
ಗೊತ್ತೇ ಆಗೋದಿಲ್ಲ
ಹಾಗೋ ಹೀಗೋ
ಆ ಯೌವನವು
ಕಳೆದು ಹೋಗಿ
ಏನೇನೋ
ನೆನಪಿಸುತ್ತದೆ !!
ಬದುಕಿನ
ಜಂಜಾಟದಲಿ
ಯೌವನವೂ
ಕಳೆದು ಹೋಗಿ
ನೆನಪಿಸಿಕೊಂಡಾಗ
ಮುಗುಳ್ನಗೆ ತರಿಸುತ್ತದೆ !!!
ಯೌವನ ಕಳೆದು
ಮುಪ್ಪುಅಪ್ಪಳಿಸಿದಾಗ
ಅರಿವಾಗುತ್ತದೆ
ಆಗ ಬದುಕು ಹೇಗಿತ್ತು
ಈಗ ಹೇಗಾಯಿತಲ್ಲ?
- ಶರಣಗೌಡ ಬಿ.ಪಾಟೀಲ – ತಿಳಗೂಳ, ಕಲಬುರಗಿ.
