ಬಿದಿರಿನ ಎಳೆಯ ಮೊಳಕೆ ಅಂದರೆ ಕಳಲೆಯನ್ನು ವಿವಿಧ ಖಾದ್ಯವನ್ನಾಗಿ ಮಾಡಿ ತಿನ್ನುವುದರಿಂದ ಆಗುವ ಲಾಭವನ್ನು ನಾಟಿ ವೈದ್ಯ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಮಳೆಗಾಲದ ಸಮಯದಲ್ಲಿ ಮಾತ್ರ ಸಿಗುವ ಮೆಡಿಸಿನ್ ಯುಕ್ತ ತರಕಾರಿ ಕಳಲೆ (ಬಿದಿರಿನ ಎಳೆಯ ಮೊಳಕೆ) : ಆಷಾಢ ಶ್ರಾವಣ ಮಾಸದಲ್ಲಿ ಸಿಕ್ಕುವ ಕಳಲೆ ಪಲ್ಯ, ಸಾಂಬಾರು, ರಾಯತಾ, ಕೊಸುಂಬರಿ, ದೊಸೆ, ವಡೆ, ಆಂಬೊಡೆ, ವಡಪ್ಪೆ ಎಷ್ಟೊಂದು ತರಹೆವಾರು ಅಡಿಗೆ ಸವಿರುಚಿ ಜೊತೆಗೆ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುತ್ತದೆ.
ಫೋಟೋ ಕೃಪೆ : myfermentation
ಇದರ ಜೊತೆಗೆ ಗೊತ್ತಿಲ್ಲದೇ ದೇಹವನ್ನು ಸೇರಿರುವ ಮನುಷ್ಯನ ಮತ್ತು ಪ್ರಾಣಿಗಳ ಕೂದಲು ಹೊರಹಾಕಲು ಒಳ್ಳೆಯ ಮೆಡಿಸಿನ್.ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಯಾದರೂ ಆಹಾರದಲ್ಲಿ ಸೇವಿಸಲೇ ಬೇಕಾದ ಕಳಲೆ ಅತಿಯಾದರೆ ಮೂಲವ್ಯಾಧಿ ಉಂಟಾಗುತ್ತದೆ.
- ಸುಮನಾ ಮಳಲಗದ್ದೆ