‘ಎನುತಿಹುದು’ ಕವನ – ಖಾದರ್ ಎಕೆ



‘ಕರಗುತ್ತಿಲ್ಲ ಆಸೆಯು, ಮುಗಿಯುತ್ತಿಲ್ಲ ಬಯಕೆಯು ಬೇಕೆನಿತಿಹುದು…’ ಯುವ ಕವಿ ಖಾದರ್ ಎ ಕೆ ಅವರ ಸುಂದರ ಕವನಗಳು ಮುಂದೆ ಓದಿ …

ಕರಗುತ್ತಿಲ್ಲ ಆಸೆಯು
ಮುಗಿಯುತ್ತಿಲ್ಲ #ಬಯಕೆಯು
ಬೇಕೆನಿತಿಹುದು ಎಲ್ಲವನ್ನು
ಸಾಲುತ್ತಿಲ್ಲ ಎನುತಿಹುದು

ಮುರುಕು ಜೋಪಡಿಯ ಅಡಿಯವನು
ಸಾಲು-ಸಾಲು ಅಂತಸ್ತು ಬಿದ್ದಿರಲು
ಸಾಲುತ್ತಿಲ್ಲ ಎನುತಿಹನು

ಚಿಲ್ಲರೆಯ ಬೇಡುತ್ತ ಬಂದವನು
ಗರಿಗರಿ ನೋಟ ಕಂತೆಯು ಇರಲು
ಸಾಲುತ್ತಿಲ್ಲ ಎನುತಿಹನು

ಹಾಲು ಪಾಳು ಗಂಜಿಗೆ ಅಲೆದಾಡು-
ತ್ತಿದ್ದವನು ಬಿರಿಯಾನಿ ಮಿಕ್ಕಿದರೂ
ಸಾಲುತ್ತಿಲ್ಲ ಎನುತಿಹನು

ಹೋಗಿ ಬಂದು ಒಡಗುಡುತ್ತಿದ್ದವನು
ಜೋಳಿಗೆಯು ತುಂಬಿ ಚೆಲ್ಲಾಡುತ್ತಿದರೂ
ಸಾಲುತ್ತಿಲ್ಲ ಎನುತಿಹನು

ಸಾಲು ಸಾಲು #ಹೆಣಗಳು ಸತ್ತು
ಬಿದ್ದಿರಲು ತನಗೆ ಸಿಕ್ಕಿದ್ದು
ಸಾಲುತ್ತಿಲ್ಲ ಎನುತಿಹನು


  • ಖಾದರ್ ಎಕೆ (ಯುವ ಕವಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW