‘ಗಣೇಶನ ಹಬ್ಬ’ ಕವನ – ಸವಿತಾ ಮುದ್ಗಲ್

ಸರ್ವಕುಟುಂಬದ ರಕ್ಷಕ ನೀನಾಗು ವಿನಾಯಕನೇ, ಸುಖ ಸಮೃದ್ಧಿಯ ಬಾಳಿಗೆ ಬೆಳಕಾಗು ಏಕದಂತನೆ…ಸವಿತಾ ಮುದ್ಗಲ್ ಅವರ ಗಣೇಶ ಭಜನೆಯನ್ನು ತಪ್ಪದೆ ಮುಂದೆ ಓದಿ…

ಗಜಮುಖನೆ ಗಣಪತಿಯೇ ನಿನಗೆ ವಂದನೆಗಳು
ಗಜಮುಖನೆ ಗಣಪತಿಯೇ ನಿನಗೆ ಕೋಟಿ ನಮನಗಳು||ಪ ||

ಮನದ ಅಜ್ಞಾನವಿಂದುಮೇಲುಗೈ ಸಾಧಿಸುತ ಕುಣಿಯುತಿದೆ ಮನದವಿಕಾರಗಳಿಂದು ಕಾಲ್ತುಳಿತಕೆ ಹೃದಯ ತಲ್ಲಣಿಸುತ್ತಿದೆ||1||

ವಿದ್ಯೆಯ ಕಲಿತ ಮನಸ್ಸಿಗೆ ದಾರಿ ತೋರಿಸು
ಗಣಪನೆ ಬುದ್ದಿ ನೀಡಿ ಮುನ್ನೆಡೆಸು
ಮುಂದಿನ ಬಾಳಿನಪಯಣಕೆ||2||

ಭಕ್ತಿಭಾವದಿಂದ ನಿತ್ಯಪೂಜಿಸುವೆ ನಿನಗೆ
ಕಾಪಾಡು ಅಷ್ಟವಕ್ರಗಳ ನಿವಾರಿಸಿ
ಶುಭದ್ರತೆಯ ಕೊಟ್ಟು ಕಾಪಾಡು||3||

ಸರ್ವಕುಟುಂಬದ ರಕ್ಷಕ ನೀನಾಗು
ವಿನಾಯಕನೇ
ಸುಖಸಮೃದ್ಧಿಯ ಬಾಳಿಗೆ ಬೆಳಕಾಗು ಏಕದಂತನೆ||4||

ಸಿಹಿಭಕ್ಷಿಗಳ ಸವಿಯುತ ಸದಾ ನೀನಿರು
ಕಹಿ ಜೀವನದ ಸುಳಿಯಲ್ಲಿ ಬಿಡದಂತೆ ನನ್ನ ಕಾಪಾಡು ಮುದ್ದು ಗಣಪತಿಯೆ ||5||


  • ಸವಿತಾ ಮುದ್ಗಲ್ – ಬಳ್ಳಾರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading