ಚರಣ ಸ್ಪರ್ಶದಿಂದಲೇ ಪಾಪವೆಲ್ಲವು ನಾಶ…ದತ್ತ ದತ್ತ ನಿನ್ನ ನಾಮ ನಾಲಿಗೆಯಲ್ಲಿರಲಿ…ಕವಿ ಸವಿತಾ ರಮೇಶ ಅವರ ಲೇಖನಿಯಲ್ಲಿ ಅರಳಿದ ಗುರು ದತ್ತಾತ್ರೇಯ ಸ್ಮರಣೆಯನ್ನು ತಪ್ಪದೆ ಮುಂದೆ ಓದಿ…
ದತ್ತ ನಿನ್ನ ಮಹಿಮೆ ಅರಿಯದಾದೆ ಅಂದು
ಇತ್ತ ನಿನ್ನ ಕೃಪೆಯಾ ಬೀರು ಎಂದೆ ಇಂದು//
ಕಷ್ಟ ನಷ್ಟದಿ ನೊಂದು ಬೆಂದಿಹೆನು ನಾನು
ಇಷ್ಟ ಪಟ್ಟು ನಿನ್ನಯ ಭಕ್ತಳಾಗಿ ಸ್ವೀಕರಿಸು//
ಎಷ್ಟು ಜನ್ಮದ ಪುಣ್ಯ ನಿನ್ನ ಪಾದ ಸಿಕ್ಕಿದೆ
ಇಷ್ಟು ದಿನ ಕಣ್ಣಿದ್ದು ಕುರುಡಿ ನಾನಾಗಿದ್ದೆ //
ದಿವ್ಯ ಮಹಿಮ ನಿನ್ನ ಸೇವೆ ಮಾಡೋ ಭಾಗ್ಯ
ನಿತ್ಯ ಸಿಗಲಿ ನಿನ್ನ ಸನಿಹ ಇರುವ ಕ್ಷಣಗಳು//
ಚರಣ ಸ್ಪರ್ಶದಿಂದಲೇ ಪಾಪವೆಲ್ಲವು ನಾಶ
ಪರಮ ಶ್ರೇಷ್ಠ ದಿವ್ಯ ಮೂರ್ತಿಯ ನಿವಾಸ //
ದತ್ತ ದತ್ತ ನಿನ್ನ ನಾಮ ನಾಲಿಗೆಯಲ್ಲಿರಲಿ
ಎತ್ತ ನೋಡಿದರು ದತ್ತ ಎನಗೆ ಕಾಣುತಿರಲಿ//
ದತ್ತನಿದ್ದರೆ ಮತ್ತೆ ಭಯವೆಂಬುವುದು ದೂರ
ದತ್ತ ನಿನ್ನ ಸ್ಮರಣೆಯೊಂದೆ ಎನ್ನ ಉಸಿರಾಗಲಿ //
- ಸವಿತಾ ರಮೇಶ
