ಕೆ ವಿ ತಿರುಮಲೇಶರ ನೆನಪಿನಲ್ಲಿ ಕವಿ, ಲೇಖಕ ಜಬೀವುಲ್ಲಾ ಎಮ್.ಅಸದ್ ಅವರು ಬರೆದ ಸುಂದರ ಕವನ ಮತ್ತು ಅವರ ಕುಂಚದಲ್ಲಿ ಅರಳಿದ ಕೆ ವಿ ತಿರುಮಲೇಶರ ಅವರ ಸುಂದರ ಕಲಾಕೃತಿ…
ಬೆಳ್ಳಿಗೂದಲು
ಕುರುಚಲು ಗಡ್ಡ
ಮೂಗಿನ ಮೇಲೆ
ಕದಲದೆ ಕೂತ
ಕನ್ನಡಕದ ಹಿಂದೆ
ತೀಕ್ಷ್ಣ ನೋಟ
ಕಾಲರ್ ಶರ್ಟು
ಅರ್ಧ ಮಡಚಿದ ತೋಳು
ಸೊಂಟಕೆ ಬೆಲ್ಟು
ದೊಗಳೇ ಜೀನ್ಸ್ ಪ್ಯಾಂಟು
ಥೇಟು ವಿಜ್ಞಾನಿಯ ರೂಪ
ಭಾಷಾ ಶಾಸ್ತ್ರಜ್ಞ
ಕವಿ ಅಭಿಜ್ಞಾ
ದೂರದ ಅರಬ್ನಲ್ಲಿ ವಾಸ
ಕನ್ನಡದ ಪ್ಯಾಸ
ಜೊತೆಗೊಂದಷ್ಟು
ಚಿತ್ರ ಬರೆಯುವ ಗೀಳು
ಮರಳುಗಾಡಿನಲ್ಲಿ
ಅನ್ಯಮನಸ್ಕ!
ಸರಳ ವ್ಯಕ್ತಿತ್ವ
ಎಷ್ಟು ಸಾಧ್ಯವೋ ಅಷ್ಟು
ಅವರಂತೆ ಅವರ ಬರಹ
ಸುಂದರ ಮತ್ತು ವಿರಳ
ಸೂಪರ್ ಮತ್ತು ಬೆಷ್ಟು
ಕಾಣುವುದು ಕಡಿಮೆ
ಸಭೆ, ಸಮಾರಂಭಗಳಿಗೆ ದೂರ
ಪ್ರಶಸ್ತಿ, ಪುರಸ್ಕಾರಗಳ ಒಲವಿಲ್ಲ
ತಾನಾಯಿತು
ತನ್ನ ಕೆಲಸವಾಯಿತು
ಹಿರಿಯ ಸಾಹಿತಿ ಎಂಬ
ಅಹಂ ಕಾಣುವುದೇ ಇಲ್ಲ
ಮಾತು ಕಡಿಮೆ, ಹೆಚ್ಚು ಕೆಲಸ
ಅರ್ಥಪೂರ್ಣ ಬದುಕು
ಸಾದ ಸೀದ
ನಮ್ಮ ಕನ್ನಡದ
ಹೆಮ್ಮೆಯ ಕವಿ
ಕೆ.ವಿ. ತಿರುಮಲೇಶರು
- ಜಬೀವುಲ್ಲಾ ಎಮ್.ಅಸದ್