ಅವಿನಾಶ ಸೆರೆಮನಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ತಾಯೊಡಲಿಂದ ಹೊರಜಗತ್ತಿಗೆ ಬರುತ
ಮೊದಮೊದಲು ತೊದಲು ನುಡಿಯುತ
ಅಮ್ಮಾ ಎಂದುಸುರಿದ ಮೊದಲ ನುಡಿ
ಕನ್ನಡ
ಬರಿಗಲ್ಲಾಗಿದ್ದ ಮನಗಳ ಕೆತ್ತಿ
ಅದರೊಳಗೆ ಅಕ್ಷರವ ಬಿತ್ತಿ
ಸಾರ್ಥಕ ಬದುಕನು ಕಲಿಸಿದ ಭಾಷೆ
ಕನ್ನಡ
ಪರ ಭಾಷಿಗರನ್ನೂ ಸೆಳೆದು
ನಿರಾಶ್ರಿತರಿಗೂ ಆಶ್ರಯವಿತ್ತು
ಸ್ಫೂರ್ತಿಯಿಂದ ಬಾಳಲು ಕಲಿಸಿದ ಬೀಡು
ಕನ್ನಡ
ದ್ವೇಷಿಸುವವರಿಗೂ ಶುಭವನು ಕೋರಿದ
ಅಕ್ಕರೆಯಿಂದ ಸತ್ಕಾರ ತೋರಿದ
ಹೃದಯ ವೈಶಾಲ್ಯತೆಯ ಗೂಡು
ಕನ್ನಡ
- ಅವಿನಾಶ ಸೆರೆಮನಿ
