ಸಮರಸ ವೆಂಚರ್ಸ ‘ನಮ್ಮ ಮಕ್ಕಳು ನಮ್ಮ ಭವಿಷ್ಯ’ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಮೈಸೂರಿನಲ್ಲಿ ಆಯೋಜಿಸಿದೆ. ಆಸಕ್ತರು ಈಗಲೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿ…ಈ ಕಾರ್ಯಗಾರದಲ್ಲಿ ನುರಿತ ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ, ಖ್ಯಾತ ಮನ:ಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ, ಖ್ಯಾತ ವೃತ್ತಿ ಸಮಾಲೋಚಕರು ಪ್ರೊ. ಶಂಕರ್ ಬೆಳ್ಳೂರ್ ಭಾಗವಹಿಸುವರು, ತಪ್ಪದೆ ಮುಂದೆ ಓದಿ…
ಮಕ್ಕಳು ನಮ್ಮ ಆಸ್ತಿ. ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸಿ ಅವರನ್ನು ಒಂದು ದಡಕ್ಕೆ ಸೇರಿಸುವುದು ಒಂದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಸಮರಸ ವೆಂಚರ್ಸ ‘ನಮ್ಮ ಮಕ್ಕಳು ನಮ್ಮ ಭವಿಷ್ಯ’ ಎಂಬ ಒಂದು ದಿನದ ಕಾರ್ಯಾಗಾರ ಏರ್ಪಡಿಸಲು ನಿಶ್ಚಯಿಸಿದೆ. ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಖ್ಯಾತ ಮನ:ಶಾಸ್ತ್ರಜ್ಞ ಡಾ. ವಿರೂಪಾಕ್ಷ ದೇವರಮನೆ, ಖ್ಯಾತ ವೃತ್ತಿ ಸಮಾಲೋಚಕರು ಪ್ರೊ. ಶಂಕರ್ ಬೆಳ್ಳೂರ್ ಅವರೂ ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಮಾರ್ಚ 2 ರಂದು ನಡೆಯುವ ಈ ಕಾರ್ಯಾಗಾರಕ್ಕೆ ಒಂದು ಶುಲ್ಕವೂ ಇರುತ್ತದೆ. ಈ ಕಾರ್ಯಾಗಾರವು ಪೋಷಕರಿಗೆ, ಅಧ್ಯಾಪಕರಿಗೆ ಹಾಗೂ ಶಿಕ್ಷಣತಜ್ಞರಿಗೆ ಸಹಕಾರಿಯಾಗಲಿದೆ. ಆಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಕೋರುವೆ.
ಧನ್ಯವಾದಗಳೊಂದಿಗೆ,
ಕನಕರಾಜು – ಸಮರಸ ವೆಂಚರ್ಸ, ಮೈಸೂರು (9448973582)
- ಆಕೃತಿಕನ್ನಡ ನ್ಯೂಸ್
