‘ಸಿಡಿಲಮರಿ ಸ್ವಾಮಿ ವಿವೇಕಾನಂದ’ ಕವನ

ಭಾರತದ ಹಿರಿಮೆ ಗರಿಮೆ ಹಬ್ಬಿತು ಜಗದ ದಶದಿಕ್ಕಿಗೆ ಆಧ್ಯಾತ್ಮವೇ ಭಾರತದ ಉಸಿರೆಂಬುದು ಅರುಹಿದೆ ವಿದೇಶಿಯರಿಗೆ …ಹಿರಿಯ ಕನ್ನಡ ಉಪನ್ಯಾಸಕರು ಪ್ರೊ. ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಸಿಡಿಲಮರಿ ಸ್ವಾಮಿ ವಿವೇಕಾನಂದ
ಭಾರತೀಯ ಸಂಸ್ಕೃತಿಗೆ ಎಂಥ ಪರಮಾನಂದ !
ವೀರಸನ್ಯಾಸಿ ನೀನೇ ನಮ್ಮ ಭಾರತ ದೇಶಕ್ಕೆ ಸ್ಪೂರ್ತಿ
ನಿನ್ನನ್ನು ನೆನೆದರೆ ಮೈ ರೋಮಾಂಚನ ದಿನಂಪೂರ್ತಿ !!

ಸ್ವಾಮಿ ಪರಮಹಂಸರ ಪ್ರೀತಿಯ ಶಿಷ್ಯ
ಕಳಚಿದೆ ಭಾರತೀಯರ ಅಜ್ಞಾನದ ದಾಸ್ಯ !
ಯುವಕರಿಗೆ ಅದ್ಭುತ ಆದರ್ಶದ ಮಾರ್ಗದರ್ಶಕ
ಅನುದಿನವೂ ನಿನ್ನ ನೆನೆಯುವುದೇ ನಮಗೆ ನಾಕ !!

ಚಿಕಾಗೋ ನಗರದಲ್ಲಿ ಅನುರಣಿಸಿತು ನಿನ್ನ ಭಾಷಣ
ಸರ್ವಜನ ಎದ್ದುನಿಂತು ಚಪ್ಪಾಳೆ ತಟ್ಟಿದ ಪುಣ್ಯ ಕ್ಷಣ !
ಭಾರತದ ಹಿರಿಮೆ ಗರಿಮೆ ಹಬ್ಬಿತು ಜಗದ ದಶದಿಕ್ಕಿಗೆ
ಆಧ್ಯಾತ್ಮವೇ ಭಾರತದ ಉಸಿರೆಂಬುದು ಅರುಹಿದೆ ವಿದೇಶಿಯರಿಗೆ !!

ನಿನ್ನ ಮಾತು ಕೇಳಿದ ಬಿಳಿಯರು ಮಂತ್ರಮುಗ್ಧ
ಪಾಶ್ಚಿಮಾತ್ಯದೆಲ್ಲೆಡೆ ಹಬ್ಬಿತು ನಿನ್ನ ಕೀರ್ತಿಯ ಶಬ್ದ !
ಕರೆ ಕರೆದು ಮಾಡಿದರು ನಿನಗೆ ಸನ್ಮಾನ ಸಮಾರಂಭ
ಭಾರತೀಯರಿಗೆ ಅದು ಪುಣ್ಯ ಪರ್ವದ ಆರಂಭ !!

ಮತ್ತೊಮ್ಮೆ ಜನಿಸಿ ಬಾ ಈ ಪವಿತ್ರ ನೆಲದಲ್ಲಿ
ಎಲ್ಲೆಡೆ ನಿನ್ನಿಂದಲೇ ಇನ್ನೊಮ್ಮೆ ಕ್ರಾಂತಿ ಮೊಳಗಲಿ !
ಮಲಗಿದ ಜನರನ್ನು ಎಚ್ಚರಿಸಲು ನೀನೇ ಸೂಕ್ತ ಪರಮಾತ್ಮ
ದಾರಿ ಕಾಯುತ್ತಿದೆ ನಿನಗಾಗಿ ಭಾರತೀಯರ ಕೋಟ್ಯಾನುಕೋಟಿ ಆತ್ಮ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading