‘ವಿದ್ಯಾವೇದಿನಿ’ ಕವನ – ಜಯಮಾರುತಿ.ಟಿ.ಹೆಚ್

ಶಿಕ್ಷಕರಾದ ಜಯಮಾರುತಿ.ಟಿ.ಹೆಚ್ ಅವರ ಕವನವನ್ನು ತಪ್ಪದೆ ಮುಂದೆ ಓದಿ… 

|ಶೃಂಗೇರಿಪುರ ವಾಸಿ ಶ್ರೀ ಶಾರದಾಂಬೆ
ಸುಗುಣಗಳಗಣಿತ ವೈಭವಿತೆ ಮಧುರಾತೀತೆ…|
ಬಣ್ಣಿಸಲೆನಿತು ಜನುಮವೇ ಮುಗಿದು
ಜನನಿ ಜಾಹ್ನವಿ ಮುನಿಗಣ ಪೂಜಿತೆ

|ಶಂಗೇರಿ ಪುರವಾಸಿ ಶ್ರೀ ಶಾರದಾಂಬೆ..|

ವಿದ್ಯಾದೇವತೆ ವೀಣಾವಾದಿತೆ ಸುಮಧುರವಾಣಿ
ನಾದನೀನಾದಂಗಳ ಸುಲಲಿತ ಸ್ವರಾದಿತೆ
ಸಾನ್ನಿಧ್ಯವೆಮಗೆ ಸಂಚಿತ ಸುಫಲದೈಸಿರಿ
ವಂದಿಸಿ ನಿಂತಿಹೆ ಕರಮುಗಿದನುದಿನ

|ಶೃಂಗೇರಿ ಪುರ ವಾಸಿ ಶ್ರೀ ಶಾರದಾಂಬೆ…|

ಕಮಲನಾಭನ ನಾಭಿಕಮಲದ ಬ್ರಹ್ಮತೇಜ
ಕಮಲಾಸುತನ ಕಾಮಿತ ಕೋಮಲೆ ಹಂಸಕುಲೇ
ಕಾವ್ಯಾಖಿಲನಿಧಿ ಕಲಾ ಕೌಶಲಾಧಿಪತೇ ವಾರೀಧಿಯೇ
ವೇದಾವೇದಿನಿ ಜ್ಞಾನಪ್ರದಾಯಿನಿ ಶಾರದೆಯೇ…

|ಶೃಂಗೇರಿ ಪುರವಾಸಿ ಶ್ರೀ ಶಾರದಾಂಬೆ..|

ಬೇಡುತ ನಿಂತಿಹೇ ಮಡಿಯದ ಜ್ಞಾನವನನುಗ್ರಹಿಸೆನಗೆ
ಪಾಡುವೆಯನುದಿನ ವಾಣಿಯ ಗಾನ ಬ್ರಹ್ಮೀಯಸ್ತುತಿಸಿ
ಒಲಿದರೆ ಹಂಸಿನಿ ಒಲುಮೆಯ ವೇದಿನಿ ಜ್ಞಾನದ ಬೆಳಗು
ಕತ್ತಲ ಸರಿದು ಬಿತ್ತಿದೆ ಕಾಂತಿ ಅಕ್ಕರೆಯಿಂದಲೇ ಅಕ್ಷರಿ ನಿಂದಳು..

|ಶೃಂಗೇರಿ ಪುರ ವಾಸಿ ಶ್ರೀ ಶಾರದಾಂಬೆ…|

ನಿತ್ಯ ನಿರಂತರೇ ನಿಶ್ಚಲೆ ಮತಿಯಲಿ ನೆಲೆಸಿದರೆ
ಚಂಚಲ ಮನವಿದು ಹಂಸಿನಿ ಬರದಿರೆ
ಆದಿ ಲಕ್ಷ್ಮೀ ಈಶ್ವರಿ ಈರ್ವರೂ ನೀನಿರದಿರುವರೇ…?
ಐಸಿರಿ ಬೇಡೇ ಐಭೋಗ ಕೇಳೇ ವಾಗ್ದೇವಿ ನೀನಿರೆ ಸಕಲವೂ ತಾನೇ…

|ಶೃಂಗೇರಿ ಪುರವಾಸಿ ಶ್ರೀ ಶಾರದಾಂಬೆ..
ಸುಗುಣಗಳಗಣಿತ ವೈಭವಿತೆ ಮಧುರಾತೀತೆ.. |


  • ಜಯಮಾರುತಿ.ಟಿ.ಹೆಚ್ – ಶಿಕ್ಷಕರು, ಚಳ್ಳಕೆರೆ ತಾ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading