ಎಲ್ಲರೂ ತಪ್ಪದೇ ಮತದಾನವನ್ನು ಮಾಡೋಣ…ರಾಷ್ಟ್ರಕ್ಕೆ ಸೂಕ್ತ ವಾದ ನಾಯಕರನ್ನು ಆರಿಸೋಣ…ಡಾ. ಕಲ್ಮೇಶ ಬಡಿಗೇರ ಅವರು ಮತದಾನ ಕುರಿತು ಒಂದು ಜಾಗೃತಿಯ ಕವನ, ತಪ್ಪದೆ ಮುಂದೆ ಓದಿ…
ಮತದಾನ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು
ಚಲಾಯಿಸದಿದ್ದರೆ ಪ್ರಜಾಪ್ರಭುತ್ವ ಹಿಡಿಯುವದು ತುಕ್ಕು||
ಪ್ರತಿಯೊಬ್ಬ ಪ್ರಜೆಯ ಒಂದೊಂದು ಮತದಾನ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವ ಸಾಧನ. ||
ಎಲ್ಲರೂ ತಪ್ಪದೇ ಮತದಾನವನ್ನು ಮಾಡೋಣ
ರಾಷ್ಟ್ರಕ್ಕೆ ಸೂಕ್ತ ವಾದ ನಾಯಕರನ್ನು ಆರಿಸೋಣ||
ಇದು ಐದು ವರ್ಷಗಳಿಗೊಮ್ಮೆ ಸಿಗುವ ಅವಕಾಶ
ಜಾಗೃತಿಯಿಂದ ಚಲಾಯಿಸಿ ಕಟ್ಟೋಣ ಸುಭದ್ರ ದೇಶ ||
- ಡಾ. ಕಲ್ಮೇಶ ಬಡಿಗೇರ
