‘ಯಾನ’ ಕವನ – ಚಂದ್ರಗೌಡ ಕುಲಕರ್ಣಿ

ಕವಿ ಚಂದ್ರಗೌಡ ಕುಲಕರ್ಣಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಗುರಿಯನು ಮುಟ್ಟಲು ಸಾಗುತಲಿರುವುದು
ಅನಂತ ವಿಶ್ವದ ಯಾನ !

ಅತ್ತಿತ್ ವಾಲದೆ ಮುನ್ನಡೆದಿರುವುದು
ಬಳಸುತ ಒಡಲಿನ ತ್ರಾಣ !

ಹಿಮನದಣ ಮುಂದಣ ಇಂದಣ ಗತಿಯನು
ಸೂಚಿಸುತಿರುವವು ಗಾಲಿ !

ನೆಲದಾಕರ್ಷಣೆ ಸಂಬಾಳಿಸುವುದು
ತಪ್ಪದೆ ಹಿಡಿಯುತ ಜೋಲಿ !

ಎತ್ತು ಜತ್ತಿಗೆ ನುಂಗಿದ ಹಾಗೆ
ಹ್ಯಾಂಡ್ಲು ಪೆಡ್ಲು ಕಾಲು !

ಒಂದರೊಳೊಂದು ಬೆರೆತೊಂದಾಗಿವೆ
ಕಾಣಿಸದಂತೆ ಸಾಲು !

ಯತ್ನ ಅದೃಷ್ಟವ ಎಳೆದೊಯ್ಯುವವು
ಮುಟ್ಟುವ ದಿಕ್ಕಿನ ಕಡೆಗೆ !

ಗುರಿಯನು ಮುಟ್ಟಲಿ ಮುಟ್ಟದೆ ಇರಲಿ
ಸಲುವುದು ಶ್ರದ್ಧೆಯ ನಡೆಗೆ !


  • ಚಂದ್ರಗೌಡ ಕುಲಕರ್ಣಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW