‘ಅಪ್ಪನ ಆಸೆಯಂತೆ ಬೀಡಿ ಸೇದಿಸಿದ್ದು … ಸ್ವಲ್ಪ ಲಘುವಾಗಲಿ ಎಂಬ ಆಸೆಯಿಂದ’ … ಕವಿ ಹಂದಿಕುಂಟೆ ನಾಗರಾಜ ಅವರ ಲೇಖನಿಯಲ್ಲಿ ಅರಳಿದ ಅಪ್ಪನ ಮೇಲಿನ ಪ್ರೀತಿ, ಮುಂದೆ ಓದಿ…
ಅಪ್ಪ ಸೇದಿದ ಕೊನೆಯ ಬೀಡಿ
ಅಪ್ಪ ಒಂದೊಂದೇ
ಬೀಡಿಯನ್ನು
ಹೊರಗೆಳೆದು ಸುಡುತ್ತಿದ್ದ!!
ಕೊನೆಗೆ…
ಆ ಎಲ್ಲಾ ಬೀಡಿಗಳು
ಒಗ್ಗಟ್ಟಾಗಿ
ಅಪ್ಪನ ವಿರುದ್ಧ
ಗೆಲುವು ಸಾಧಿಸಿದವು.!!??
ಅಪ್ಪ ಒಂದಷ್ಟು
ಬೀಡಿಗಳಿಗೆ
ಜೀವದಾನ ನೀಡಿದ್ದರೆ
ತಾನೂ ಇರಬಹುದಿತ್ತೇನೋ
ಅನಿಸುತ್ತದೆ..??
- ಹಂದಿಕುಂಟೆ ನಾಗರಾಜ