‘ಬಾಳು’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಮಗುವಿಗೆ ಹೇಗೆ ಬಾಳಬೇಕು ಎನ್ನುವುದನ್ನು ಕವಿತೆಯ ಸಾಲುಗಳಲ್ಲಿ ಸುಂದರವಾಗಿ ವರ್ಣಿಸಿದ್ದಾರೆ, ತಪ್ಪದೆ ಓದಿ…
ನೆರೆಜನರಿಗೆ ಹೊರೆಯಾಗಿ
ಅರೆಕಾಲ ಜೀವಿಸದಿರು

ಮರದ ನೆರಳಂತೆ ನೆರವಾಗಿ #ಬಾಳು

ಕರೆನುಡಿಯಲು ಸೆರೆಯಾಗಿ
ತೆರೆಮರೆಯ ಸೇರದಿರು

ಬಿರಿದ ಸುಮದ ಗಮದಂತೆ ಬಾಳು

ಕುಟುಕಾಡುವ ನಟರೊಳಗೆ
ದಿಟವಾಡುತ ಬೆರೆಯದಿರು

ಮೊಟುಕಾಗಿ ಅವರಿಂದ ಹಠವಾಗಿ ಬಾಳು

ಚಟವಿರುವ ವಟಬಿಳಲನು
ಮುಟ್ಟುತಲಿ ಕರೆಯದಿರು

ಮೆಟ್ಟುತಲಿ ಅವರನ್ನು ದೂರವಿಟ್ಟು ಬಾಳು

ತಪ್ಪಾಡುತಲಿ ಬೆಪ್ಪಾಗುತಲಿ
ಹೆಪ್ಪಾಗುತಲಿ ತೆರೆಯದಿರು

#ತೆಪ್ಪಗೆ ಸೊಪ್ಪಾಗಿ ಹಸಿರಂತೆ ಬಾಳು

ಕೆಪ್ಪನಾಗುತಲಿ #ಕುಪ್ಪೆಯಾಗುತಲಿ
ಕಪ್ಪೆಗಳಡಚುವ ದನಿಯಾಗದೆ

ತೆಪ್ಪವ ತೇಲಿಸುವ ನಾವಿಕನಾಗಿ ಬಾಳು.


  • ಚನ್ನಕೇಶವ ಜಿ ಲಾಳನಕಟ್ಟೆ  (ಕವಿಗಳು, ಲೇಖಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW