‘ದಿವಿಯ ಲೋಕ’ ಕವನ – ಬಿಟ್ಟೀರ ಚೋಂದಮ್ಮ,

ಹೊಸ ವರುಷಕ್ಕೊಂದು ಹೊಸ ಕವನದಂತೆ ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರು ಬರೆದಿರುವ ‘ದಿವಿಯ ಲೋಕ’ ಕವನವನ್ನು ತಪ್ಪದೆ ಓದಿ…

ಹೊಸತು ವರುಷ ಬುವಿಗೆ ಬರಲು
ಶಿಶಿರದಲ್ಲಿ ನಡುಗೊ ಚಳಿಗೆ
ಬಿಸಿಲ ಬೆಳಗು ಹಿತವ ನೀಡುತಿತ್ತುತನುವಿಗೆ
ಹಸಿರು ವನದ ಗುಡ್ಡಗಾಡು
ಹೊಸೆದ ಬಂಧ ಮಂಜು ಮೋಡ
ಬೆಸೆದು ಭೂಮಿ ಗಗನವನ್ನು ತೋಳ ತೆಕ್ಕೆಗೆ

ಧವಳ ಗಿರಿಯ ತೆರದೊಳವನಿ
ಭುವನದೊಳಗೆ ಮೆರೆಯುತಿರಲು
ಭವನವೊಂದು ಹರನ ಗುಡಿಯ ಕಲಶದಂತೆಯೆ
ಸವಿತೃ ದೇವನಿಳೆಯಲಿಳಿಯೆ
ಕವಿಯ ಕರವು ಕವನ ಬರೆಯೆ
ದಿವಿಜ ಲೋಕವಿಳಿಯುತಿಳೆಯ ಬೆಳಗಿದಂತೆಯೆ

ತರಣಿ ತೆರಳೆ ಪಿತರ ಲೋಕ
ಸರಣಿಯಂತೆ ಸೆಳೆಯುತೆಳೆದು
ಸರಳವಾಗಿ ಮೃತರ ಜೀವ ರಜದ ಕಣದೊಳು
ಮರಳಿ ಹುಟ್ಟು ಪಡೆಯಲೆಂದು
ಭರದಿ ಕಾರ್ಯ ಸಾಗುತಿಹುದು
ಗಿರಣಿಯಂತೆ ತಿರುಗಿ ಜನನ ಮರಣ ಜಗದೊಳು


  • ಬಿಟ್ಟೀರ ಚೋಂದಮ್ಮ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading