‘ಕಾಯಕ ಯೋಗಿ’ ಕವನ

ಲೋಕದ ಕಣ್ಣಿಗೆ ಎಲ್ಲೂ ಕಾಣನು ರೈತ, ಉಣ್ಣುವ ಅಗುಳಲಿ ಬೆರೆತವನೀತ…ಕೊಡಗಿನ ಕವಿ ಹೇಮಂತ್ ಪಾರೇರಾ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಉಳುವವನೆಂದು ಮಣ್ಣಿಗೆ ಮಗನು
ಲೋಕದ ಹಸಿವನು ತಣಿಸುವನು !
ಉಳುವ ಎತ್ತಿನ ನೊಗದಲ್ಲಿ ಕೋಶ
ನೇಗಿಲ ಯೋಗಿಯ ಕೈಯಲ್ಲಿ ದೇಶ !!

ಬಾರದ ಮಳೆಗೆ ಉತ್ತಿ ಬಿತ್ತಿದ ಬೆಳೆಗೆ
ಆಗಸ ನೋಡುತ್ತಾ ಮೊರೆಯಿಡುವ !
ಸುಡು ಬಿಸಿಲಿಗೆ ಬಾಡಿಯೂ ಕುಗ್ಗದೆ
ರಾತ್ರಿಯ ಬಾನಿಗೆ ಮೋಡಗಳ ಕರೆವ !!

ರವಿಯನು ಕಾಯದೆ ಮಣ್ಣಿಗೆ ಇಳಿದು
ಮುಂಜಾನೆ ಮೊದಲು ಅವನಿಂದ !
ಹುಟ್ಟಿದ ಸಸಿಗೆ ಸಲಹುತ್ತಾ ಪೊರೆದು
ಹಸಿವನು ತಣಿಸುತ್ತಾ ಅವ ನಗುವ !!

ಲೋಕದ ಕಣ್ಣಿಗೆ ಎಲ್ಲೂ ಕಾಣನು ರೈತ
ಉಣ್ಣುವ ಅಗುಳಲಿ ಬೆರೆತವನೀತ !
ಬಿಸಿಲಿರಲೇನು ಚಳಿ ಮಳೆಯಿರಲೇನು
ನೇಗಿಲ ಹಿಡಿದು ಹೊರಟ ಅನ್ನದಾತ !!

ಉಳುವ ನೇಗಿಲ ಹಿಡಿದು ನಡೆಯಲು
ಉಳುಮೆಯೇ ದೇವರು ತಾ ನಂಬುವ !
ಬಡತನ ಸಿರಿತನ ಮಣ್ಣಲ್ಲಿ ಕಾಣಲು
ಕೆಸರಲ್ಲಿ ಮೊಸರು ಎನ್ನುತ್ತಾ ದುಡಿವ !!


  • ಹೇಮಂತ್ ಪಾರೇರಾ – ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading