ಕವಿ ಪದ್ಮನಾಭ. ಡಿ ಅವರು ರಕ್ಷಾಬಂಧನ ಕುರಿತು ಬರೆದ ಆಪ್ತ ಕವಿತೆಯನ್ನು ತಪ್ಪದೆ ಓದಿ…
ಕೈಗೆ ಸೋದರಿ ಕಟ್ಟಿದಂತ ರಾಖಿಯು
ಬೆಲೆ ಕಟ್ಟಲಾಗದ ಭಾವದೊಡವೆಯು
ಒಲವು ತುಂಬಿದ ಮನದ ಬೆಸುಗೆಯು
ಸೋದರತ್ವಕೆ ಎಂದೆಂದೂ ಸಾಕ್ಷಿಯು//
ಹರಿವ ನೀರಿನ ತೆರದಿ ಶುದ್ಧವು
ಅಣ್ಣ ತಂಗಿಯ ಮಧುರ ಭಾವವು
ಮುರಿಯದಂತಹ ಮಮತೆ ಬಂಧನ
ಸೂಚಿಸುತಿಹುದು ಈ ರಕ್ಷಾಬಂಧನ//
ಹರುಷದಲೆಗಳ ಸಂಭ್ರಮ ಕಾಣಲಿ
ದೈವಕರುಣೆ ನಿನ್ಞ ಬಾಳ ಬೆಳಗಲಿ
ನಿನ್ನ ಬಾಳಿನ ಸವಿಬುತ್ತಿಯೂಟದಿ
ನನ್ನ ನೆನಪು ಒಂದು ತುತ್ತಾಗಿರಲಿ//
ಕಷ್ಟ ಬಂದಾಗ ಮನ ನನ್ನ ನೆನೆಯಲಿ
ಭರವಸೆಯೊಂದು ಮನದಿ ಮೂಡಲಿ
ಎಲ್ಲೇ ಇದ್ದರೂ ಶುಭವ ಕೋರುವೆ
ಎಂಬ ನೆನಪನು ಈ ರಾಖಿ ಸಾರಲಿ//
- ಪದ್ಮನಾಭ. ಡಿ. ( ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ
– 2022 ಕವಿಗಳು, ಲೇಖಕರು) ಮೈಸೂರು.