‘ಚಟಗೇಡಿ ಚಟ್ಟಕ್ಕೇರುವನು’ ಕವನ

ಹಣ ಹೋಗುವುದು ಬರುವುದು ನಿತ್ಯನಿರಂತರ… ಕೊನೆಗೆ ಖಾಲಿ ಕೈ ದಾಸ…ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ…

ಚಟವ ಮಾಡುವ ಮನುಜ
ನೀನು ಚಟಕ್ಕೇರುವುದು ಬಲುಬೇಗ ಸಹಜ !

ಅದೇನು ಒಂದೇ ಎರಡೇ ಹತ್ತು  ಹಲವಾರು
ಬೀಡಿ, ಸಿಗರೇಟು, ಗಾಂಜಾ, ದಾರು, ತಂಬಾಕು ಹಾಗೂ ಗುಟಕಾ ನಸೆಯಲ್ಲಿಯೇ  ತೇಲಾಡುವರು !

ತೂತು ಬಿದ್ದ ಅಂಗಿ, ಬಾತು ಹೋದ ಮುಖ
ಬಾಯಲ್ಲಿ ಹೊಗೆ ಸೊಪ್ಪು, ಮಾತು ಬಲು ಸಪ್ಪೆ
ಬಾಯಿ ತೆರೆದರೆ ಬಚ್ಚಲುಮೋರಿ !

ನೋಡಿದರೆ  ಹೇಸಿಗೆ ಬಂದು ವಾಂತಿ ಖಾತ್ರಿ
ಇದಲ್ಲದೆ ಇಸ್ಪೀಟು, ಮಟಕಾ ಹಾಗೂ ಲಾಟರಿ
ಹತ್ತಿದರೆ ಮಟಕಾ ಇಲ್ಲದಿರೆ ಜಟಕಾ !

ಹಣ ಹೋಗುವುದು ಬರುವುದು ನಿತ್ಯನಿರಂತರ
ಕೊನೆಗೆ ಖಾಲಿ ಕೈ ದಾಸ ಕಂಡವರಿಗೆ ಭಿಕ್ಷುಕರ ವೇಷ
ಚಟದಿಂದ ಯಾರಾಗಿದ್ದಾರೆ ಮುಂದು !

ಇದು ಜಾನಕಿ ಕಂಡ ಬಂಗಾರದ ಜಿಂಕೆ
ಬೆನ್ನು ಹಿಂದೆ ಓಡಿದರೆ ಗೊತ್ತಾಗುತ್ತದೆ
ಅದೊಂದು ಮಾಯಾ ಜಿಂಕೆ !

ಹಿಡಿದಿಟ್ಟುಕೊಳ್ಳಲು  ಹೋದರೆ ಬೀಳಲೇಬೇಕು ಮತ್ತೇಳಲು ಸಾಧ್ಯವಾಗದ ಹಾಳುಬಾವಿ !
ಯುವಕರೆ ಬಿಟ್ಟುಬಿಡಿ ದುಶ್ಚಟ
ನೀವಾಗಿ ಅಪರಂಜಿ ಅಪ್ಪಟ !!


  • ಪ್ರೊ. ಸಿದ್ದು ಸಾವಳಸಂಗ, ತಾಜಪುರ –  ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading