‘ಗೆಜ್ಜೆ ಕಟ್ಟಿದವರಾರು ಕಾಲಿಗೆ’ ಕವನ – ಶಿವದೇವಿ ಅವನೀಶಚಂದ್ರ

ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ …

ಬೆಟ್ಟ ಬಂಡೆಯ
ಮೇಲೆ
ಗೆಜ್ಜೆಕಾಲ್ಗಳು
ನರ್ತಿಸುತಿವೆ
ಜೀವನೋಲ್ಲಾಸದ
ಪದವ ಹಾಡಿ

ಹಸಿರು ಬಸಿರೆಲ್ಲ
ಕಂಪಿಸಿದೆ
ಏಕೆ ರಂಗೇರಿತೋ
ಮೊಗ
ಇಣುಕಿದವರಾರು ಅಲ್ಲಿ

ನವಿಲುಗರಿಯ ಕಿರೀಟಿ
ನುಡಿಸಿರಬಹುದೇ ಕೊಳಲ
ಆ ಕಾನನದೆದೆಯ ಬೃಂದಾವನದಲ್ಲಿ

ಮತ್ತೇರಿದ್ದಾಳೆ ಗೋಪಿ
ಪಿಚಕಾರಿಯಲಿ
ರಂಗು ತುಂಬಿ
ಓಕುಳಿಯಾಟಕ್ಕೆ
ಮನವ ಹೂಡಿ


  • ಶಿವದೇವಿ ಅವನೀಶಚಂದ್ರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW