‘ಕನ್ನಡ ಸಂಜೀವಿನಿ’ ಕವನ

ಎಸ್ ಬಿ ಹೂಲಿ ಲಕ್ಷ್ಮಣ ಕೋಳಿವಾಡ ಅವರ ರಚನೆಯ ಈ ಕವಿತೆಯನ್ನು ತಪ್ಪದೆ ಮುಂದೆ ಓದಿ …

ಕಾವ್ಯ ಲಹರಿಯಲಿ
ಕನ್ನಡದ ಕಸ್ತೂರಿ

ಕಾನನದ ಪರಿಮಳದಿ
ಕನ್ನಡದ ಕನಕಾಂಬರಿ

ಕೃಷ್ಣೆ ಒಲಿದು ಶರಾವತಿ
ಕನ್ನಡದಿ ತುಂಗಭದ್ರೆ ನೇತ್ರಾವತಿ

ಕಲಕಲನೇ ಹರಿವನದಿ
ಕಾಳಿ-ಕಾವೇರಿ ಸಂಜೀವಿನಿ

ಕಣದೊಳು ಹಿಡಿಮೇಟಿ
ಕನ್ನಡದ ಫಸಲುಫಲಿಸಿ

ಕಜಣ ತುಂಬಿರಾಶಿ
ಕನ್ನಡಬೀಜ ಉತ್ತಿಬಿತ್ತಿ

ಕಾಫಿ-ಅಡಿಕೆ ರೇಷ್ಮೆ-ಏಲಕ್ಕಿ-ರಾಗಿ
ಕಾಳು-ಬೇಳೆರಫ್ತೇ ಕನ್ನಡದಸಿರಿ

ಕಂಗೊಳಿಸಿ ಮೈಮನದಿ
ಕನ್ನಡದ ತರುಣಿ ಸಹ್ಯಾದ್ರಿ

ಕಣ್ಣಂಚಲೇ ಸೆರೆಯಾಗುವಳು
ಕಾರುಣ್ಯಮೂರ್ತಿ ಚಾಮುಂಡಿ

ಕಟ್ಟುಗೋಪುರ ಹೃದಯದಿ
ಕನ್ನಡ ಭಾಷಾಲಂಕಾರದಿ

ಕಬ್ಬಿಣದಕಡಲೆಯಲ್ಲ ಗೆಳತಿ
ಕನ್ನಡವು ಕಬ್ಬು-ಜೇನಿನರುಚಿ

ಕರುನಾಡ ಒಡಲಲಿ
ಕನ್ನಡಾಂಬೆಗೆ ಜಯಭೇರಿ

ಕನಕಾಂಬರವಾಗಿ ಮುಡಿಗೇರಿ
ಕನ್ನಡಕಿರಿಟ ತಾಯಿಭಾರತಿಗಿರಿಸಿ


  • ಎಸ್ ಬಿ ಹೂಲಿ ಲಕ್ಷ್ಮಣ ಕೋಳಿವಾಡ – ಸುಳ್ಯ ( ದ.ಕ )

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW