ಕನ್ನಡ ಕನ್ನಡ ಹಾ ಸವಿಗನ್ನಡ

ಕನ್ನಡ ಅಕ್ಷರ ಕಲಿತವರೆಲ್ಲ ಆಗುವರು ಬಲು ಜಾಣ…ಅಪ್ಪಯ್ಯ ಯು ಯಾದವ್ ಅವರ ಕನ್ನಡಾಭಿಮಾನದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಕನ್ನಡ ಕನ್ನಡ ಹಾ ಸವಿಗನ್ನಡ
ಅ ಆ ಇ ಈ ಕನ್ನಡ ಅಕ್ಷರ
ರತ್ನದ ಮಣಿಯಂತೆ l

ಕನ್ನಡ ನುಡಿಗಳು
ನಾಲಗೆಗೆ ಅದು
ಜೇನಿನ ಹನಿಯಂತೆ l

ಕನ್ನಡನಾಡಲಿ ಹುಟ್ಟುವ
ಮಕ್ಕಳು
ಪುಣ್ಯಮಾಡಿದಂತೆ l

ಅವರಾಡುವ ತೊದಲು
ನುಡಿಯನು ಕೇಳಲು
ವೀಣೆನಾದದಂತೆ l

ಕನ್ನಡ ಶಾಲೆಯ ಆವರಣವೆ
ದೇವರಿರುವ ತಾಣ l

ಕನ್ನಡ ಅಕ್ಷರ ಕಲಿತವರೆಲ್ಲ
ಆಗುವರು ಬಲು ಜಾಣ l

ಪಂಪರನ್ನರು ರತ್ನ ಮಣಿಗಳು
ಕನ್ನಡಮ್ಮನ ಮುಕುಟದಲಿl

ಕುವೆಂಪು ಬೇಂದ್ರೆ
ಸೂರ್ಯ ಚಂದ್ರರೊಲು
ಹೊಳೆದರು ಕನ್ನಡ ಕಾವ್ಯದಲಿ l

ಕನ್ನಡಕುವರರೆ ಬನ್ನಿರೆಲ್ಲರು
ತೇರನೆಳೆಯೋಣ l

ಕನ್ನಡಮ್ಮನ ಹೊನ್ನ ಮುಕುಟಕೆ
ಜ್ಯೋತಿಯ ಬೆಳಗೋಣ l

ಕನ್ನಡ ಕನ್ನಡ ಹಾ ಸವಿಕನ್ನಡ
ಎನ್ನುತ ಹಾಡಿ ಕುಣಿಯೋಣ


  • ಅಪ್ಪಯ್ಯ ಯು ಯಾದವ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading