‘ಸತ್ಯವಂತರಿಗಿಂತಲೂ ಮಿಥ್ಯವಂತರಿಗೆ ಈಗ ಕಾಲ !’ … ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ.ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಒಳ್ಳೆಯವರಿಗಿಂತಲೂ
ದುಷ್ಟರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ಪ್ರಾಮಾಣಿಕರಿಗಿಂತಲೂ
ಮೋಸಗಾರರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ಸತ್ಯವಂತರಿಗಿಂತಲೂ
ಮಿಥ್ಯವಂತರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ದುಡಿಯುವವರಿಗಿಂತಲೂ
ಸೋಮಾರಿಗಳಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ಕಾಪಾಡುವವರಿಗಿಂತಲೂ
ಕೊಲ್ಲುವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ಕರುಣಾಮಯಿಗಳಿಗಿಂತಲೂ
ಕೆಟ್ಟಕಟುಕರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ತಾಳ್ಮೆ ತೋರುವವರಿಗಿಂತಲೂ
ಗಡಿಬಿಡಿ ಮಾಡುವವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ಸಹನಾವಂತರಿಗಿಂತಲೂ
ಮತ್ಸರ ಪಡುವವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ಸಹಾಯ ಮಾಡುವವರಿಗಿಂತಲೂ
ಮೋಜು ನೋಡುವವರಿಗೆ ಈಗ ಕಾಲ !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
ನೀವು ಏನೇ ಮಾಡಿದರೂ
ಮೇಲೊಬ್ಬನಿದ್ದಾನೆ ಎಲ್ಲವನ್ನು ನೋಡಲು !
ಹೌದಾದರೆ ಹೌದು ಎನ್ನಿ, ಇಲ್ಲವಾದರೆ ಇಲ್ಲವೆನ್ನಿ !!
- ಪ್ರೊ. ಸಿದ್ದು ಸಾವಳಸಂಗ (ಕಾವ್ಯನಾಮ – ಚಿರಂಜೀವಿ) – ತಾಜಪುರ, ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು ವಿಜಯಪುರ
