‘ಕುಟಿಲ ನೀತಿ’ ಕವನ – ಅನಂತ ನಾಯಕ

ಬಾನಿನಗಲ ಮೇಘದಲ್ಲೂ ಹಾನಿಗೊಳಿಸೋ ಸುಳಿಯಿದೆ…ಕವಿ ಅನಂತ ನಾಯಕ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ನೀತಿ ನಡತೆ ಬದಿಯಲಿಟ್ಟು
ಭೀತಿ ತುಂಬಲಾಗಿದೆ |
ಪ್ರೀತಿಯಲ್ಲೂ ಕುಟಿಲವಿದ್ದು
ಧಾತುವಿನಲೆ ಕೊಳಕಿದೆ ||೧||

ಬಾನಿನಗಲ ಮೇಘದಲ್ಲೂ
ಹಾನಿಗೊಳಿಸೋ ಸುಳಿಯಿದೆ |
ಗಾನತನನ ಖಗಗಳೆಲ್ಲ
ಮೌನಮೊಗವ ಹೊತ್ತಿವೆ ||೨||

ಬೀಸಿ ಬಂದ ಮರುತದಲ್ಲೂ
ಘಾಸಿಗೊಳಿಪ ಬಿಸಿಯಿದೆ |
ತಾಸಿಗೊಮ್ಮೆ ನೆರಗು ಬದಲು
ಹೇಸಿ ಸರಕು ಹಳಸಿದೆ ||೩||

ಅರಳು ಕುಡಿಗೆ ನೆರಳನೀವ
ಕರುಳಕೊಂಡಿ ಕಳಚಿದೆ |
ತರುಗಳಲ್ಲಿ ಕಸುವುಯಿರದೆ
ಬಿರಿದು ಕರಕಲಾಗಿವೆ ||೪||

ಬೆಸೆವ ಮನವ ಹೊಸಕಿಹಾಕಿ
ಎಸೆವ ಛಲವು ನಿಲ್ಲಲಿ |
ಹಸನ ತಂಪು ಎಲರಿನಿಂದ
ವ್ಯಸನಭಾವ ಅಳಿಯಲಿ ||೫||


  • ಅನಂತ ನಾಯಕ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW