ಗುಹೆಯಿಂದ ಹೊರಬಂದ ಗುಳಿಬಿದ್ದ ಕಣ್ಣುಗಳಿಂದ ಮಸುಕಾದ ವ್ಯಕ್ತಿಯೊಬ್ಬ ಹೊರಗೆ ಬಂದದ್ದನ್ನು ನೋಡಿದೆನು.ಆ ವಿಸ್ಮಯವು ನನಗೆ ನಡುಗುವಂತೆ ಮಾಡಿತು. ಏನಾಯಿತು ಇಮ್ತಿಯಾಜ್ ಖಾನ್ (ಸಂತಶಿಶು) ಅವರ ಸೂಫಿ ಕಥೆಗಳನ್ನು ತಪ್ಪದೆ ಮುಂದೆ ಓದಿ….
ಸಂತ ಝುನ್ನೂನ್ ಮಿಸ್ರಿಯವರ ಜೀವನದಲ್ಲಿ ನಡೆದ ಒಂದು ಘಟನೆ ಅವನು ಸಂಬಂಧಿಸಿದ್ದಾನೆ (ಉರ್ದು ಕಥೆಯ ಅನುವಾದ) ನಾನು ಪರ್ವತಗಳಲ್ಲಿ ಅಲೆದಾಡುತ್ತಿದ್ದಾಗ, ರೋಗ ಬಾಧಿತ ಜನರ ಗುಂಪೊಂದು ಒಂದೆಡೆ ಒಟ್ಟಿಗೆ ಸೇರಿರುವುದನ್ನು ನಾನು ಗಮನಿಸಿದೆ.
“ನಿಮಗೆ ಏನಾಯಿತು?” ನಾನು ಕೇಳಿದೆ.
‘ಇಲ್ಲಿ ಗುಹೆಯಲ್ಲಿ ಒಬ್ಬ ಮಹಾ ದೈವಭಕ್ತ ವಾಸಿಸುತ್ತಿದ್ದಾನೆ’.
“ಪ್ರತಿ ವರ್ಷ ಒಮ್ಮೆ ಅವನು ಗುಹೆಯಿಂದ ಹೊರಗೆ ಬಂದು ಏನೋ ಮಂತ್ರಿಸಿ ರೋಗಿಗಳ ಮೇಲೆ ಊದುತ್ತಾನೆ ಮತ್ತು ಅವರು ಗುಣಮುಖರಾಗುತ್ತಾರೆ. ನಂತರ ಅವನು ತನ್ನ ಗುಹೆಗೆ ಹಿಂತಿರುಗುತ್ತಾನೆ ಮತ್ತು ಮುಂದಿನ ವರ್ಷದವರೆಗೆ ಮತ್ತೆ ಹೊರಬರುವುದಿಲ್ಲ.” ನಾವೆಲ್ಲ ಅವನಿಗಾಗಿ ಕಾಯುತ್ತಿದ್ದೇವೆ ಎಂದು ಅವರಲ್ಲಿ ಒಬ್ಬನು ವಿವರಿಸಿದನು.

ನನಗೆ ಆಶ್ಚರ್ಯವಾಯಿತು. ಅವನು ಹೊರಬರುವವರೆಗೂ ನಾನು ತಾಳ್ಮೆಯಿಂದ ಕಾಯುತ್ತಿದ್ದೆ. ಬಳಿಕ ಗುಹೆಯಿಂದ ಹೊರಬಂದ ಗುಳಿಬಿದ್ದ ಕಣ್ಣುಗಳಿಂದ ಮಸುಕಾದ ವ್ಯಕ್ತಿಯನ್ನು ನಾನು ನೋಡಿದೆನು. ಆ ವಿಸ್ಮಯವು ನನಗೆ ನಡುಗುವಂತೆ ಮಾಡಿತು. ಅವನು ಸಹಾನುಭೂತಿಯಿಂದ ಅಲ್ಲಿ ನೆರೆದ ಜನಸ್ತೋಮವನ್ನು ಗಮನಿಸಿದನು. ನಂತರ ಅವನು ಆಕಾಶದತ್ತ ತನ್ನ ಕಣ್ಣುಗಳನ್ನು ಎತ್ತಿದನು ಮತ್ತು ನೊಂದವರ ಮೇಲೆ ಹಲವಾರು ಬಾರಿ ಊದಿದನು. ಎಲ್ಲರೂ ವಾಸಿಯಾದರು.
ಅವನು ತನ್ನ ಗುಹೆಯಲ್ಲಿ ಮರಳುತ್ತಿದ್ದನು. ನಾನು ಹೋಗಿ ಅವನ ನಿಲುವಂಗಿಯನ್ನು ಹಿಡಿದುಕೊಂಡು ಜಗ್ಗಿದೆನು. ‘ಸರ್ವಶಕ್ತನಾದ ದೇವನ ಪ್ರೀತಿ ಉಮ್ಮಳಿಸಿ ನಾನು ಅಳುತ್ತಿದ್ದೆ.
“ನೀವು ಈ ಜನರ ಬಾಹ್ಯ ಕಾಯಿಲೆಯನ್ನು ಗುಣಪಡಿಸಿದ್ದೀರಿ, ಈಗ ನನ್ನ ಆಂತರಿಕ ಕಾಯಿಲೆಯನ್ನು ಗುಣಪಡಿಸಲು ಪ್ರಾರ್ಥಿಸಿರಿ.” ಎಂದು ಗದ್ಗದಿತನಾದೆನು.
‘ಝುನ್ನೂನ್…’ ಎಂದು ನನ್ನತ್ತ ನೋಡುತ್ತಾ ಅವರು ಹೇಳಿದರು. ನಿನ್ನ ಕೈಯನ್ನು ಬೇಗನೇ ಎತ್ತಿಕೋ. ಸರ್ವಶಕ್ತ ಸ್ನೇಹಿತನು ತನ್ನ ಸಾಮರ್ಥ್ಯ ಮತ್ತು ಘನತೆಯ ಉತ್ತುಂಗದಿಂದ ನೋಡುತ್ತಿದ್ದಾನೆ.
ನೀವು ಅವನಿಗಿಂತ ಇನ್ನೊಬ್ಬರನ್ನು ನಂಬಿರುವುದನ್ನು ನೋಡಿದರೆ, ಅವನು ನಿಮ್ಮನ್ನು ಆ ವ್ಯಕ್ತಿಗೆ ಮತ್ತು ಆ ವ್ಯಕ್ತಿಯನ್ನು ನಿಮಗೆ ಬಿಟ್ಟುಬಿಡುತ್ತಾನೆ ಮತ್ತು ಆನಂತರ ನೀವು ಪರಸ್ಪರರ ಕೈಯಲ್ಲಿಯೇ ಮುಂದುವರಿಯುತ್ತೀರಿ” ಎನ್ನುತ್ತಾ ನಡೆಯ ತೊಡಗಿದನು.
ನಾನು ತಬ್ಬಿಬ್ಬಾದೆ. ತೀವ್ರ ಪಶ್ಚತ್ತಾಪದಿಂದ ಅವನನ್ನು ಗಮನಿಸುತ್ತ ನಿಂತುಕೊಂಡೆ.
- ಇಮ್ತಿಯಾಜ್ ಖಾನ್ (ಸಂತಶಿಶು) – ಸೂಫಿ ಕಥೆಗಳು (ಉರ್ದು ಮೂಲ)
