ಮೊದಲ ವಿಶ್ವ ಮಹಾಯುದ್ಧದ ನಡೆದು ಇಂದಿಗೆ 125 ವರ್ಷ ಸಂದಿವೆ. ಭಾರತೀಯರು ತಮ್ಮದಲ್ಲದ ಯುದ್ದದಲ್ಲಿ ಭಾಗವಹಿಸಬೇಕಾದ ಸಂದರ್ಭ ಒದಗಿಬಂದಾಗ ಹಿಂಜರಿಯದೇ ಹೋರಾಡಿ ದಿಗ್ವಿಜಯ ಸಾಧಿಸಿದವರು. ಇಸ್ರೇಲ್ ಹೈಫಾ ನಗರವನ್ನು ಶತ್ರುಗಳಿಂದ ಗೆದ್ದುಕೊಟ್ಟು ಇಸ್ರೇಲ್ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದು ಇಂದಿಗೆ 125 ವರ್ಷ ಸಂದಿವೆ, ಭಾರತೀಯರಂದರೆ ಅಭಿಮಾನಪಡುವಂತೆ, ಎಂತಹ ಸಂದಿಗ್ಧತೆಯ ಸ್ಥಿತಿಯಲ್ಲಿಯೂ ನಮ್ಮ ಪರವಾಗಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮ ಯೋಧರದು. ಅದರಲ್ಲಿ ನಮ್ಮ ಮೈಸೂರಿನ ಸಂಸ್ಥಾನದ ವೀರಯೋಧರು ಭಾಗವಹಿಸಿದ್ದು ವಿಶೇಷ. ತಮ್ಮ ತ್ಯಾಗ ಬಲಿದಾನದ ಮೂಲಕ ಇಸ್ರೇಲ್’ನ ಸ್ವತಂತ್ರಕ್ಕೆ ಮುನ್ನುಡಿ ಬರೆದರು ನಮ್ಮ ಯೋಧರು. – ಡಾ.ಗುರುಪ್ರಸಾದ ರಾವ್ ಹವಲ್ದಾರ್, ತಪ್ಪದೆ ಮುಂದೆ ಓದಿ…
ಮೊದಲ ವಿಶ್ವ ಮಹಾಯುದ್ಧದ ನಡೆದು ಇಂದಿಗೆ 125 ವರ್ಷ ಸಂದಿವೆ. ಭಾರತೀಯರು ತಮ್ಮದಲ್ಲದ ಯುದ್ದದಲ್ಲಿ ಭಾಗವಹಿಸಬೇಕಾದ ಸಂದರ್ಭ ಒದಗಿ ಬಂದಾಗ ಹಿಂಜರಿಯದೇ ಹೋರಾಡಿ ದಿಗ್ವಿಜಯ ಸಾಧಿಸಿದವರು.
ಇಸ್ರೇಲ್ ಹೈಫಾ ನಗರವನ್ನು ಶತ್ರುಗಳಿಂದ ಗೆದ್ದುಕೊಟ್ಟು ಇಸ್ರೇಲ್ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದು ಇಂದಿಗೆ 125 ವರ್ಷ ಸಂದಿವೆ, ಭಾರತೀಯರಂದರೆ ಅಭಿಮಾನಪಡುವಂತೆ, ಎಂತಹ ಸಂದಿಗ್ಧತೆಯ ಸ್ಥಿತಿಯಲ್ಲಿಯೂ ನಮ್ಮ ಪರವಾಗಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮ ಯೋಧರದು. ಅದರಲ್ಲಿ ನಮ್ಮ ಮೈಸೂರಿನ ಸಂಸ್ಥಾನದ ವೀರಯೋಧರು ಭಾಗವಹಿಸಿದ್ದು ವಿಶೇಷ. ತಮ್ಮ ತ್ಯಾಗ ಬಲಿದಾನದ ಮೂಲಕ ಇಸ್ರೇಲ್’ನ ಸ್ವತಂತ್ರಕ್ಕೆ ಮುನ್ನುಡಿ ಬರೆದರು ನಮ್ಮ ಯೋಧರು.
ಒಟ್ಟೋಮನ್ ಟರ್ಕಿಯು ಈಗಿನ ಇಸ್ರೇಲ್ʼನ ಹೈಫಾ ಸೇರಿದಂತೆ ಬಹುಭಾಗ ಆಕ್ರಮಿಸಿಕೊಂಡು 400 ವರ್ಷಗಳಿಂದ ಆಡಳಿತ ನಡೆಸುತಿತ್ತು. ಇಸ್ರೇಲಿಗರು ಜಗತ್ತಿನಾದ್ಯಂತ ಹರಿದು ಹಂಚಿ ಹೋಗಿದ್ದರು. ತಮ್ಮದೇ ಆದ ರಾಜ್ಯ ಅಥವಾ ರಾಷ್ಟ್ರ ಇರಲಿಲ್ಲ. ಮೊದಲ ಮಹಾಯುದ್ಧದ ಸಂದರ್ಭಗಳಲ್ಲಿ ಇಸ್ರೇಲಿಗರಿಗೆ ಬ್ರಿಟಿಷರು ನೀಡಿದ್ದ ಆಶ್ವಾಸನೆಯಂತೆ 1918ರ ಸೆಪ್ಟೆಂಬರ್ 22 ಮತ್ತು 23ನೇ ದಿನ ಒಟ್ಟೋಮನ್ ಟರ್ಕರ ಪ್ಯಾಲೆಸ್ತೀನ್ನ ಭಾಗವಾಗಿದ್ದ ಹೈಫಾ ನಗರವನ್ನು ಬಿಡುಗಡೆಗೊಳಿಸಿ ಇಸ್ರೇಲಿಗರಿಗೆ ಒಪ್ಪಿಸಿದರು.
ಫೋಟೋ ಕೃಪೆ : google
ಹೈಫಾ ನಗರವು ಒಟ್ಟೋಮನ್ ಟರ್ಕಿ ಆಳ್ವಿಕೆಯಿಂದ ಬಿಡುಗಡೆಗೊಂಡ ನಂತರ ತಮ್ಮ ತಾಯ್ನಾಡಿಗಾಗಿ ‘ಜಿಯಾನಿಸಂ’ ಆಂದೋಲನ ನಡೆಸುತ್ತಿದ್ದ ಯಹೂದಿಗಳಲ್ಲಿ ಹೊಸ ವಿಶ್ವಾಸ ಮತ್ತು ಉತ್ಸಾಹ ಮೂಡಿತು. ಭೂಪಟದಾದ್ಯಂತ ಚದುರಿದ್ದ ಯಹೂದಿ ಜನಾಂಗವು ನಿಧಾನವಾಗಿ ತಮ್ಮ ದೇಶಕ್ಕೆ ಮರಳಲು ಆರಂಭಿಸಿದರು.
ಭಾರತದಲ್ಲಿ ಮುಂಬಯಿ, ಪುಣೆ, ಥಾಣೆ ನಗರಗಳಲ್ಲಿ ವಾಸವಿದ್ದ ಯಹೂದಿಗಳನೇಕರು ತಮ್ಮ ದೇಶಕ್ಕೆ ಹೊರಟರು. ಮಧ್ಯಪ್ರಾಚ್ಯದ ರಾಜಕೀಯದ ಚಿತ್ರಣ ಬದಲಾಯ್ತು. ಅತ್ತ ಜರ್ಮನಿ ಸೋತು ಯುರೋಪ್ನ ಸಮೀಕರಣ ಬದಲಾದರೆ, ಇತ್ತ ಅಮೆರಿಕ ಹೊಸ ಶಕ್ತಿಯಾಗಿ ಉದಯಿಸಿ ವಲಸೆ ಬಂದ ಯಹೂದಿಗಳನ್ನು ತನ್ನವರನ್ನಾಗಿಸಿಕೊಂಡಿತು.
ಬ್ರಿಟಿಷರಿಗೆ ಹೈಫಾವನ್ನು ಬಿಡುಗಡೆಗೊಳಿಸಲು ಅವರದ್ದೇ ಆದ ಇನ್ನೊಂದು ಕಾರಣವಿತ್ತು. ಮಧ್ಯಪ್ರಾಚ್ಯದ ಮೇಲೆ ಪ್ರಭುತ್ವ ಸಾಧಿಸಲು ಅವರಿಗೆ ನೆಲೆ ನಿಂತು, ರಾಜಕೀಯ ಮಾಡಲು ಕೇಂದ್ರವಲ್ಲದಿದ್ದರೂ ಆಯಕಟ್ಟಿನ ಜಾಗದ ಅವಶ್ಯಕತೆಯಿತ್ತು. ಹಾಗೆ ಅವರ ಕಣ್ಣಿಗೆ ಬಿದ್ದಿದ್ದು ಇಸ್ರೇಲ್ನ ಬಂದರು ನಗರ ಹೈಫಾ. ಹೈಫಾ ನಗರವು ಸರಕು ಸರಂಜಾಮು, ಆಯುಧಗಳು, ಸೈನಿಕರ ಚಲನೆಗೆ ಅನುಕೂಲಕರವಾಗಿದ್ದ ಆಯಕಟ್ಟಿನ ಜಾಗವಾಗಿತ್ತು ಅದಕ್ಕಾಗಿ 1917ರಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ಫೋರ್ ತನ್ನ ಘೋಷಣಾ ಪತ್ರದಲ್ಲಿ ಪ್ಯಾಲೆಸ್ತೀನ್ನಲ್ಲಿ ಯಹೂದಿಗಳಿಗಾಗಿ ಒಂದು ರಾಜ್ಯ ಸ್ಥಾಪನೆ ಮಾಡಲು ಅರಸೊತ್ತಿಗೆಯು ಸಮ್ಮತಿಸಿದೆ ಎಂದು ಉಲ್ಲೇಖಿಸಿದ್ದ. ಈ ರೀತಿ ಬ್ರಿಟಿಷ್ರು ಯಹೂದಿಗಳ ಪರ ವಹಿಸಿದರು. ಮೊತ್ತೊಂದು ಪ್ರಮುಖ ಅಂಶವೆಂದರೆ, ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟಿಷರ ಬತ್ತಳಿಕೆಗೆ ಸೇರ್ಪಡೆಗೊಂಡ ಶಕ್ತಿಶಾಲಿ ಅಸ್ತ್ರ TNT ಯನ್ನು ಕಂಡು ಹಿಡಿದ ರಸಾಯನಶಾಸ್ತ್ರಜ್ಞ ಕೆಮ್ ಮೆಜ್ಮನ್ ಓರ್ವ ಯಹೂದಿ. ಮುಂದೆ ಮೆಜ್ಮನ್ ಸ್ವತಂತ್ರ ಇಸ್ರೇಲ್ನ ಮೊದಲನೇ ರಾಷ್ಟ್ರಾಧ್ಯಕ್ಷನಾದ.
ಹೈಫಾ ನಗರ ಮುತ್ತಿಗೆ :
ಮೊದಲ ವಿಶ್ವಯುದ್ಧ ಮುಗಿಯುವ ಸುಮಾರು ಎರಡು ತಿಂಗಳ ಮೊದಲು ಈ ಯುದ್ಧವು ನಡೆಯಿತು. ಫ್ರಾನ್ಸ್, ಬ್ರಿಟನ್, ರಷ್ಯಾ, ಇಟಲಿ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಮಿತ್ರರಾಷ್ಟ್ರಗಳಿಗೆ ಹೈಫಾ ಆಯಕಟ್ಟಿನ ಪ್ರಮುಖ ಸ್ಥಳವಾಗಿತ್ತು – ಏಕೆಂದರೆ ಇದು ಆಳವಾದ ನೀರಿನ ಬಂದರು ಮತ್ತು ವಾಯುನೆಲೆಯನ್ನು ಹೊಂದಿತ್ತು. ಹೈಫಾ ಯುದ್ಧದ ಸಮಯದಲ್ಲಿ ಮಧ್ಯಪ್ರಾಚ್ಯ ಪಡೆಗಳಿಗೆ ಸೇವೆ ಸಲ್ಲಿಸುವ ಪ್ರಮುಖ ಪೂರೈಕೆ ನೆಲೆ, ಮತ್ತು ಬೃಹತ್ ಶಸ್ತ್ರಾಸ್ತ್ರ ಸಂಗ್ರಹಗಾರವನ್ನು ಹೊಂದಿತ್ತು. ಅಲ್ಲದೇ ಕೊಲ್ಲಿಯಲ್ಲಿ ದೊಡ್ಡ ನೌಕಾ ನೆಲೆಯಾಗಿದೆ. ಒಟ್ಟೋಮನ್ ಸಾಮ್ರಾಜ್ಯವು ಈ ಪಟ್ಟಣವನ್ನು ವಶಪಡಿಸಿಕೊಂಡಿತ್ತು ಮಿತ್ರ ರಾಷ್ಟ್ರಗಳಿಗೆ ಹೈಫಾವನ್ನು ಪುನಃ ವಶಪಡಿಸಿಕೊಳ್ಳುವುದು ಆದ್ಯತೆಯಾಗಿತ್ತು. ಮಿತ್ರರಾಷ್ಟ್ರಗಳು ಸಿನಾಯ್ ಮತ್ತು ಪ್ಯಾಲೆಸ್ಟೈನ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ, ದಾಖಲೆಗಳ ಪ್ರಕಾರ, 5 ನೇ ಅಶ್ವದಳದ ವಿಭಾಗಕ್ಕೆ ಹೈಫಾವನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ವಹಿಸಲಾಯಿತು. ನಗರದ ರಕ್ಷಕರು ಉತ್ತಮವಾಗಿ ಬೇರೂರಿದ್ದರಿಂದ, ಆರಂಭಿಕ ದಾಳಿಗಳು ಯಶಸ್ವಿಯಾಗಲಿಲ್ಲ, ಈ ಕೆಲಸವನ್ನು ಮುಗಿಸಲು ಮೈಸೂರು ಮತ್ತು ಜೋಧ್ಪುರ ಲ್ಯಾನ್ಸರ್ಗಳನ್ನು ಕರೆಯಲಾಯಿತು.
ಫೋಟೋ ಕೃಪೆ : google
ಮೈಸೂರು ಸಂಸ್ಥಾನದ ಮೈಸೂರು ಲ್ಯಾನ್ಸರ್ ಪಡೆಯನ್ನು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಯುದ್ಧಕ್ಕಾಗಿ ಸೈನ್ಯವನ್ನು ಕೊಡುವ ವಾಗ್ದಾನ ಮಾಡಿದ್ದರು, ಅದರಂತೆ, ತನ್ನ ಅಶ್ವದಳದಿಂದ ₹ 50 ಲಕ್ಷ ಮತ್ತು 700 ಸೈನಿಕರನ್ನು ಯುದ್ಧಕ್ಕೆ ಕೊಡುಗೆಯಾಗಿ ನೀಡಿದನು. ಅವರು ತಮ್ಮ ಯೋಧರಿಗೆ ಪತ್ರವೊಂದನ್ನು ಬರೆದರು, ” ವಿಶ್ವದ ಅತ್ಯುತ್ತಮ ಹೋರಾಟದ ಘಟಕವೆಂದು ಸಾಬೀತುಪಡಿಸಲು ಇದು ಅತ್ಯುತ್ತಮ ವಾದ ಅವಕಾಶವಾಗಿದೆ” ಎಂದು ಹೇಳಿದರು.
ಅಕ್ಟೋಬರ್ 1914 ರಲ್ಲಿ, ಮೈಸೂರು ರೆಜಿಮೆಂಟ್ ಬೆಂಗಳೂರು (ಈಗಿನ ಬೆಂಗಳೂರು) ಅನ್ನು ಬಿಟ್ಟು ಮಧ್ಯಪ್ರಾಚ್ಯಕ್ಕೆ ತೆರಳಿತು. 36 ಹಡಗುಗಳ ಬೆಂಗಾವಲು ಪಡೆ ಭಾರತದಿಂದ ಸೂಯೆಜ್ ಕಾಲುವೆಯ ಮೂಲಕ ಪಡೆಗಳು ಸಾಗಿದವು.
ಹೈಫಾವನ್ನು ಬ್ರಿಟಿಷ್ ಸಾಮ್ರಾಜ್ಯದ 15 ನೇ ಕ್ಯಾವಲ್ರಿ ಬ್ರಿಗೇಡ್ ಸ್ವಾಧೀನಪಡಿಸಿಕೊಳ್ಳಬೇಕಾಗಿತ್ತು, ಇದು ಹೈದರಾಬಾದ್, ಮೈಸೂರು, ಪಟಿಯಾಲ, ಅಲ್ವಾರ್ ಮತ್ತು ಜೋಧಪುರದ ರಾಜಪ್ರಭುತ್ವದ ರಾಜ್ಯಗಳ ಇಂಪೀರಿಯಲ್ ಸೇವಾ ಪಡೆಗಳನ್ನು ಒಳಗೊಂಡಿತ್ತು; ಇದನ್ನು ಆರಂಭದಲ್ಲಿ ಇಂಪೀರಿಯಲ್ ಸರ್ವೀಸ್ ಕ್ಯಾವಲ್ರಿ ಬ್ರಿಗೇಡ್ ಎಂದು ಕರೆಯಲಾಗುತ್ತಿತ್ತು. ಈ ಮೊದಲು ಸೆಪ್ಟಂಬರ್ 22ರಂದು ಬ್ರಿಟಿಷ್ ಸೇನೆಯು ಟರ್ಕಿ, ಆಸ್ಟ್ರೀಯಾ ಮತ್ತು ಹಂಗೇರಿಯ ಸಂಯುಕ್ತ ಸೇನೆಯನ್ನು ಯುದ್ಧದಲ್ಲಿ ಎದುರುಗೊಂಡು ಹಿನ್ನಡೆ ಅನುಭವಿಸಿತ್ತು. ಸುರಕ್ಷಿತ ನೆಲೆಯಲ್ಲಿ ನಿಂತು ಕಾದಾಡುತ್ತಿದ್ದ ಸಂಯುಕ್ತ ಸೇನೆಯನ್ನು ಎದುರಿಸಲು ಬಯಲು ಮೈದಾನದಲ್ಲಿ ಅಸುರಕ್ಷಿತ ವ್ಯೂಹ ರಚಿಸುವುದು ಅವಿವೇಕ ಮತ್ತು ಅವ್ಯವಹಾರಿಕ ಎಂದು ನಿರ್ಧರಿಸಿ ಬ್ರಿಟಿಷ್ ಸೇನೆಯು ಹಿಂದೆ ಸರಿಯಲು ಮುಂದಾದಾಗ ಜೋಧ್ಪುರ, ಮೈಸೂರು ಮತ್ತು ಹೈದರಾಬಾದ್ ಸೇನೆಯ ಸೇನಾಧಿಪತ್ಯದ ಹೊಣೆ ಹೊತ್ತ ಮೇಜರ್ ದಳಪತ್ ಸಿಂಗ್ ಶೇಖಾವತ್, “ನಾವು ಕ್ಷತ್ರಿಯರು, ಕೇವಲ ಸಂಬಳಕ್ಕಾಗಿ ಹೋರಾಡುವ ಸೇವಕರಲ್ಲ. ಯುದ್ಧದಲ್ಲಿ ಫಲಿತಾಂಶ ಸಿಗದೆ ವಾಪಸ್ ಹೋಗುವುದಿಲ್ಲ. ಯುದ್ಧವನ್ನು ಮುಂದುವರಿಸಲು ಅನುಮತಿ ನೀಡಿ” ಎಂದು ಬ್ರಿಟಿಷರಿಗೆ ಅನುಮತಿ ಪತ್ರಕ್ಕಾಗಿ ಒತ್ತಾಯಿಸಿದರು. ನಂತರ ಒಪ್ಪಿಗೆ ಪಡೆದು ಸೆಪ್ಟಂಬರ್ 22ರ ನಡುರಾತ್ರಿ ಮತ್ತೆ ಯುದ್ಧಕ್ಕೆ ಅಣಿಯಾದರು.
ಕಾರ್ಮೆಲ್ ಪರ್ವತದ ಮೇಲೆ ಸಜ್ಜಾಗಿದ್ದ ಜರ್ಮನಿ ಮತ್ತು ಆಸ್ಟ್ರಿಯಾದ ಸೇನೆಯನ್ನು ಅಲ್ಲಿಯೇ ಸದೆಬಡಿಯುವ ತಂತ್ರದೊಂದಿಗೆ ಮೈಸೂರಿನ 15ನೇ ಇಂಪೀರಿಯಲ್ ಸರ್ವೀಸ್ ತುಕಡಿಯು ಪರ್ವತವನ್ನೇರಿದರೆ, ಪರ್ವತದ ಕೆಳಗೆ ತೆರೆದ ಮೈದಾನದಲ್ಲಿ ನಿಂತಿದ್ದ ಟರ್ಕಿ ಸೇನೆಯನ್ನು ನಸುಕಿನಲ್ಲಿ ಮಣಿಸಲು ಜೋಧ್ಪುರದ ಸೇನೆ ಖಡ್ಗ ಹಿಡಿದು ನಿಂತಿತು. ಯುದ್ಧ ಕೈದಿಗಳಾಗಿ ಸೆರೆಸಿಕ್ಕವರನ್ನು ನಿಭಾಯಿಸುವ ಹೊಣೆಯನ್ನು ಹೈದರಾಬಾದ್ ಸೈನಿಕರದಾಗಿತ್ತು.
ಭಾರತದಿಂದ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರಿಗೆ ರಣರಂಗದ ಕಷ್ಟಗಳು ಮೊದಲೇ ತಿಳಿದಿತ್ತು. ಅಪರಿಚಿತ ಪ್ರದೇಶ, ಗೆಲುವು ಅನಿಶ್ಚಿತ, ಆಯುಧಗಳ ಕೊರತೆಯಾದರೆ ತಕ್ಷಣವೇ ಅದನ್ನು ಪೂರೈಸಬಲ್ಲ ಸೇನಾ ನೆಲೆಗಳಿಲ್ಲ. ಸೈನಿಕರ ಕೊರತೆಯಾದರೂ ಕೂಡಲೇ ಅದನ್ನು ತುಂಬಿಸುವ ವ್ಯವಸ್ಥೆಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಾವು ಯಾರಿಗಾಗಿ ಯುದ್ಧ ಮಾಡುತ್ತಿದ್ದಾರೋ ಅಂತಹ ಬ್ರಿಟಿಷರನ್ನೇ ಪೂರ್ಣ ನಂಬುವಂತಿಲ್ಲ. ಕುದುರೆಗಳಿಗೆ ಆಹಾರ, ಗಾಯಗೊಂಡಲ್ಲಿ ಚಿಕಿತ್ಸೆಯ ವ್ಯವಸ್ಥೆಯಾಗಬೇಕಿತ್ತು. ಇಂತಹ ಸಂದರ್ಭಗಳಲ್ಲಿ ಕಾರ್ಮೆಲ್ ಪರ್ವತವೋ- ಅದು ಮಳೆಯಿಂದ ತೇವಗೊಂಡಿದ್ದ ಜೌಗು ನೆಲ, ಕಡಿದಾದ ಹಾದಿ, ಆಳವಾದ ಕಣಿವೆ, ದಟ್ಟಕತ್ತಲು, ಶತ್ರುವಿನ ನಿಖರವಾದ ನೆಲೆ ತಿಳಿದಿಲ್ಲ. ಈ ಎಲ್ಲ ಅನನುಕೂಲಗಳನ್ನು ಮೀರಿ ಮೈಸೂರಿನ ಸೇನೆ ಪರ್ವತವನ್ನೇರಿ ವೈರಿಗಳನ್ನು ಕೆಳಗಿಳಿಯದಂತೆ ಬಂಧಿಸಿದರು.
ಫೋಟೋ ಕೃಪೆ : google
ಮೈಸೂರು ಲ್ಯಾನ್ಸರ್ಸ್ನ ಸ್ಕ್ವಾಡ್ರನ್ ಮೌಂಟ್ ಕಾರ್ಮೆಲ್ನ ಇಳಿಜಾರಿನಲ್ಲಿ ಆಸ್ಟ್ರಿಯನ್ ಬ್ಯಾಟರಿ ಆಫ್ ಲೈಟ್ ಫೀಲ್ಡ್ ಗನ್ಗಳ ಮೇಲೆ ದಾಳಿ ಮಾಡಿತು, ಆದರೆ ಜೋಧ್ಪುರ ಲ್ಯಾನ್ಸರ್ಗಳು ಜರ್ಮನ್ ಮೆಷಿನ್ ಗನ್ನರ್ಗಳ ಹಿಂಬದಿಯ ಮೇಲೆ ಮುಖ್ಯ ಆರೋಹಿತವಾದ ದಾಳಿಯನ್ನು ಪ್ರಾರಂಭಿಸಿದರು, ಅದು ರಸ್ತೆಯನ್ನು ನಿರ್ಬಂಧಿಸಿತು.
ಜೋಧಪುರ್ ಲ್ಯಾನ್ಸರ್ಸ್ ಮೆಷಿನ್ ಗನ್ ಮತ್ತು ಫಿರಂಗಿ ಗುಂಡಿನ ದಾಳಿಗೆ ಒಳಗಾಯಿತು. ನದಿಯ ದಡದಲ್ಲಿ ಹೂಳುನೆಲವು ಅವರಿಗೆ ಮತ್ತಷ್ಟು ಅಡಚಣೆಯಾಯಿತು.
ಆದಾಗ್ಯೂ, ಆಡ್ಸ್ ಅನ್ನು ಸೋಲಿಸಿ, ಜೋಧ್ಪುರ್ ಲ್ಯಾನ್ಸರ್ಗಳು ತಮ್ಮ ಅಧಿಕಾರವನ್ನು ಪಟ್ಟಣದೊಳಗೆ ಮುಂದುವರೆಸಿದರು, ಆಕ್ರಮಣಕಾರಿ ರೆಜಿಮೆಂಟ್ಗೆ ಬೆಂಕಿಯ ಬೆಂಬಲವನ್ನು ನೀಡುತ್ತಿದ್ದ ಮೈಸೂರು ಲ್ಯಾನ್ಸರ್ಗಳು ಆರೋಹಿಸಿ ಅವರನ್ನು ಹಿಂಬಾಲಿಸಿಕೊಂಡು ಪಟ್ಟಣಕ್ಕೆ ಬಂದರು.
ಜೋಧ್ಪುರದ ಮೇಜರ್ ದಳಪತ್ ಸಿಂಗ್ ಶೇಖಾವತ್ ಈ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದರು. ತಮ್ಮ ನಾಯಕನ ಮರಣದಿಂದ ಕಂಗೆಡದೆ ಅದರ ಸೇಡನ್ನು ತೀರಿಸಲು ಇಮ್ಮಡಿ ಉತ್ಸಾಹದಿಂದ ಸೈನಿಕರು ಕಾದಾಡಿದರು. ಕಾರ್ಮೆಲ್ ಪರ್ವತದಲ್ಲಿದ್ದ ಶತ್ರು ಸೈನಿಕರಿಗೆ ನಸುಕಿನ ಆಕ್ರಮಣವು ಅಚ್ಚರಿ ಮತ್ತು ಆಘಾತವನ್ನುಂಟುಮಾಡಿತು. ಅದರಿಂದ ಸಾವರಿಸಿಕೊಂಡು ಪ್ರತ್ಯುತ್ತರ ನೀಡುವುದರೊಳಗೆ ಮೈಸೂರಿನ ಸೈನಿಕರು ಮೇಲುಗೈ ಸಾಧಿಸಿಯಾಗಿತ್ತು. ಅದರ ಸಂದೇಶ ರವಾನೆಯಾಗುತ್ತಲೇ ಮೈದಾನದಲ್ಲಿ ಸಿದ್ಧವಾಗಿದ್ದ ಜೋಧ್ಪುರದ ಸೇನೆ ಟರ್ಕಿ ಸೈನಿಕರನ್ನು ಆಕ್ರಮಿಸಿಕೊಂಡಿತು. ನಸುಕಿನ ಆಕ್ರಮಣವು ಟರ್ಕಿ ಸೇನೆಯ ಕಲ್ಪನೆಗೆ ನಿಲುಕದ್ದಾಗಿತ್ತು. ಮೆಷಿನ್ ಗನ್ ಬುಲೆಟ್ ಗಳು ಓಡುವ ಕುದುರೆ ಗಳನ್ನು ನಿಲ್ಲಿಸಲಾರದವು.
ಸೂರ್ಯೋದಯಕ್ಕೆ ಮುನ್ನ ಆರಂಭವಾದ ಯುದ್ಧವು ಮಧ್ಯಾಹ್ನ 3 ಗಂಟೆಗೆ ಭಾರತೀಯ ಸೈನಿಕರ ಗೆಲುವಿನೊಂದಿಗೆ ಮುಕ್ತಾಯಗೊಂಡಿತು. ಟರ್ಕಿ ಸಾಮ್ರಾಜ್ಯದ 400 ವರ್ಷಗಳ ಆಳ್ವಿಕೆಯು 15 ಗಂಟೆಗಳ ಅವಧಿಯಲ್ಲಿ ಅಂತ್ಯಗೊಂಡಿತು.
ಒಟ್ಟಾರೆ, ಒಟ್ಟಾಗಿ 1,350 ಜರ್ಮನ್ ಮತ್ತು ಒಟ್ಟೋಮನ್ ಕೈದಿಗಳನ್ನು ವಶಪಡಿಸಿಕೊಂಡವು, ಇದರಲ್ಲಿ ಇಬ್ಬರು ಜರ್ಮನ್ ಅಧಿಕಾರಿಗಳು, 35 ಒಟ್ಟೋಮನ್ ಅಧಿಕಾರಿಗಳು, ನಾಲ್ಕು 4.2 ಗನ್ಗಳು ಸೇರಿದಂತೆ 17 ಫಿರಂಗಿ ಬಂದೂಕುಗಳು, ಎಂಟು 77 ಎಂಎಂ ಗನ್ಗಳು ಮತ್ತು ನಾಲ್ಕು ಒಂಟೆ ಗನ್ಗಳು ಮತ್ತು ಆರು ಇಂಚಿನ ನೌಕಾ ಬಂದೂಕುಗಳು ಮತ್ತು 11 ಮೆಷಿನ್ ಗನ್ಗಳು. 500 ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು.ಮತ್ತು 34 ಮಂದಿ ಗಾಯಗೊಂಡರು. ಯುದ್ಧದ ಪರಿಣಾಮವಾಗಿ ಒಟ್ಟೋಮನ್ ತುರ್ಕರು ಮತ್ತು ಜರ್ಮನಿಯೂ ಕದನ ವಿರಾಮಕ್ಕೆ ಸಹಿ ಹಾಕಿದರು.
ಫೋಟೋ ಕೃಪೆ : google
ಅನೇಕರಿಗೆ ತಿಳಿದಿಲ್ಲದ ಯುದ್ಧದ ಮತ್ತೊಂದು ಪ್ರಮುಖ ಫಲಿತಾಂಶವೆಂದರೆ, ಭಾರತೀಯರು ಪ್ರದರ್ಶಿಸಿದ ಶೌರ್ಯವು ಬ್ರಿಟಿಷ್ ಸರ್ಕಾರವನ್ನು ಜನಾಂಗೀಯ ಅಡೆತಡೆಗಳನ್ನು ಮುರಿಯಲು ಒತ್ತಾಯಿಸಿತು ಮತ್ತು ಅವರು ವಿರೋಧಿಸುತ್ತಿದ್ದ ಭಾರತೀಯರಿಗೆ ಕಿಂಗ್ಸ್ ಕಮಿಷನ್ ಅನ್ನು ಅಧಿಕಾರ ನೀಡಲು ದಾರಿ ತೆರೆಯಿತು.
ಮೈಸೂರು, ಜೋಧ್ಪುರ ಮತ್ತು ಹೈದರಾಬಾದ್ನ ಸೇನೆಯು ಅಶ್ವದಳದಿಂದ ಕೂಡಿತ್ತು. ಸೈನಿಕರ ಕೈಯಲ್ಲಿ ಪಾರಂಪರಿಕ ಆಯುಧಗಳಾದ ಈಟಿ ಮತ್ತು ಭರ್ಜಿ ಮಾತ್ರವೇ ಇತ್ತು. ಆದರೆ, ಎದುರಾಳಿ ಸೈನ್ಯವು ಆಧುನಿಕ ಫಿರಂಗಿ ತೋಪು ಮತ್ತು ಮಶಿನ್ಗನ್ಗಳಿಂದ ಕೂಡಿತ್ತು. ಆ ದಿನಗಳಲ್ಲಿ ಮೈಸೂರಿನ ಅರಸರ ಬಳಿ ಎರಡು ರೀತಿಯ ಸೇನಾ ತುಕಡಿಗಳಿದ್ದವು. ಮೈಸೂರು ಇಂಪೀರಿಯಲ್ ಸರ್ವೀಸ್ ಲ್ಯಾನ್ಸರ್ಸ್ (ಈಟಿ ರಾವುತರ ಪಡೆ) ಮತ್ತು ಮೈಸೂರು ಇಂಪೀರಿಯಲ್ ಸರ್ವೀಸ್ ಟ್ರಾನ್ಸ್ಪೋರ್ಟ್ ಕೋರ್ (ಇದರಲ್ಲಿ ಎತ್ತಿನಗಾಡಿಗಳು, ಕುದುರೆ ಗಾಡಿಗಳು, ತರಬೇತಿ ಪಡೆದ ಕುದುರೆಗಳು, ಹೇಸರ ಕತ್ತೆಗಳು ಮತ್ತು ಆಂಬುಲೆನ್ಸ್ ಗಾಡಿಗಳು ಇದ್ದವು) ಇದಲ್ಲದೆ ಮೈಸೂರು ಸಂಸ್ಥಾನವು ಭಾರತದ ಯುದ್ಧ ನಿಧಿಗೆ 50 ಲಕ್ಷ ರೂಪಾಯಿ ನೀಡಿತ್ತು. ಹೈಫಾ ಯುದ್ಧದಲ್ಲಿ ಮೈಸೂರು ಪಡೆಯ ನೇತೃತ್ವ ವಹಿಸಿದವರು ಕರ್ನಲ್ ದೇಶರಾಜ ಅರಸ್, ಕರ್ನಲ್ ಲಿಂಗರಾಜ ಅರಸ್ ಮತ್ತು ಕರ್ನಲ್ ಚಾಮರಾಜ ಅರಸ್. ಹೀಗೆ ಈಟಿ ರಾವುತರ ಅಶ್ವದಳವು ಆಧುನಿಕ ಮಶಿನ್ಗನ್ಗಳನ್ನು ಎದುರಿಸಿ ಜಯ ಸಾಧಿಸಿದ್ದು ಜಗತ್ತಿನ ಚರಿತ್ರೆಯಲ್ಲಿ ಗೆಲುವು ಇದೇ ಇರಬೇಕು.
ಯುದ್ಧದ ನಂತರ ಮೇಜರ್ ದಳಪತಿ ಸಿಂಗ್ ಶೇಖಾವತ್ರಿಗೆ ಬ್ರಿಟಿಷ್ ಸರ್ಕಾರವು (ಮರಣೋತ್ತರ) ‘ಹೀರೋ ಆಫ್ ಹೈಫಾ’ ಎಂಬ ಬಿರುದು ನೀಡಿ ಗೌರವಿಸಿತು.
History of British Cavalry (ಬ್ರಿಟಿಷ್ ಅಶ್ವದಳ ಇತಿಹಾಸ) ಗ್ರಂಥದಲ್ಲಿ Marquess of Angleseyಯು ಹೈಫಾ ಯುದ್ಧದ ವರ್ಣನೆಯನ್ನು ಮಾಡಿದ್ದಾರೆ. Military Operation of Egypt and Palestine (Vol 2) ಪುಸ್ತಕದಲ್ಲೂ ಹೈಫಾ ಯುದ್ಧದ ಮಾಹಿತಿಯಿದೆ.
ಇಂದಿಗೂ ಪ್ರತಿ ವರ್ಷವೂ ಹೈಫಾ ನಗರ ಬಿಡುಗಡೆಯಾದ ಈ ದಿನವನ್ನು ‘ಹೈಫಾ ಡೇ’ ಆಚರಿಸುತ್ತಾರೆ. ಅಲ್ಲಿನ ಶಾಲಾ ಪಠ್ಯಪುಸ್ತಕಗಳಲ್ಲಿ ಈ ಯುದ್ಧದ ಉಲ್ಲೇಖವಿದೆ. ಆ ಯುದ್ಧದಲ್ಲಿ ತಮ್ಮ ದೇಶಕ್ಕಾಗಿ ಪ್ರಾಣ ನೀಡಿದ ಸೈನಿಕರ ಸ್ಮರಣಾರ್ಥ ಇಸ್ರೇಲ್ ಸರಕಾರ ಹೈಫಾ ಸ್ಮಾರಕ ನಿರ್ಮಿಸಿದೆ. ಅದೇ ರೀತಿ ಭಾರತ ದಿಲ್ಲಿಯ ತೀನ್ಮೂರ್ತಿ ಚೌಕವು ಹೈಫಾ ಸ್ಮಾರಕವೇ ಆಗಿದೆ. ಅದಕ್ಕೆ ಈಗ ತೀನ್ಮೂರ್ತಿ ಹೈಫಾ ಚೌಕ ಎಂದು ಮರುನಾಮಕರಣ ಮಾಡಲಾಗಿದೆ. ಜೋಧ್ಪುರದಲ್ಲಿ ತಮ್ಮ ನೆಲದ ಹೆಮ್ಮೆಯ ಪುತ್ರ ದಳಪತ್ ಸಿಂಗ್ರ ನೆನಪಿನಲ್ಲಿ ದಳಪತ್ ಮೆಮೋರಿಯಲ್ ನಿರ್ಮಾಣವಾಗಿದೆ. ಬೆಂಗಳೂರಿನ ದೂರದರ್ಶನ ಕೇಂದ್ರ ಕಚೇರಿಯ ಬಳಿ ಇರುವ ಕಲ್ಲುಕಂಬವು ಹೈಫಾ ಸ್ಮಾರಕವೇ ಆಗಿದೆ.ಇಂದಿಗೂ ಇಸ್ರೇಲಿಗರಿಗೆ
ಭಾರತೀಯರಂದರೆ ಪ್ರೀತಿ ಗೌರವ, ನಮ್ಮವರ ಸಾಹಸ ಇಸ್ರೇಲ್ʼನಂತಹ ದೇಶದ ಸ್ವಾತಂತ್ರಕ್ಕಾಗಿ ನಾಂದಿ ಹಾಡಿದ್ದು ವಿಶೇಷವಾಗಿದೆ.ಅದರೆ ದುರ್ದೈವ ಸಂಗತಿ ಎಂದರೆ ನಮ್ಮ ಭಾರತೀಯ ಇತಿಹಾಸದ ಪಠ್ಯ ಪುಸ್ತಕ ಗಳಲ್ಲಿ ಇಂದಿಗೂ ಈ ಅಭೂತಪೂರ್ವ ಹೋರಾಟದ ಕುರಿತು ದಾಖಲೆ ಇಲ್ಲದೇ ಇರುವುದು. ಮುಂದಿನ ಪೀಳಿಗೆಯವರಿಗೆ ಈ ಹೋರಾಟ ದ ಕಥನ ತಿಳಿಯುವಂತೆ ಅಗಲಿ ಎಂಬ ಆಶಯ.
- ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು, ಉಪನ್ಯಾಸಕರು.