ಹಿರಿಯ ಸಾಹಿತಿ ಪ್ರಭಾವತಿ ಎಸ ವಿ ಅವರ ಕವನ ‘ಬಳೆ’ ಹೆಣ್ಣಿನ ಕೈಗೆ ಒಂದು ಭೂಷಣ. ಬಳೆಯ ಮಹತ್ವವನ್ನು ಈ ಕವನದ ಸಾಲುಗಳಲ್ಲಿ ಸುಂದರವಾಗಿ ಕವಿಯತ್ರಿ ವರ್ಣಿಸಿದ್ದಾರೆ.ಮುಂದೆ ಓದಿ…
ಹೊಂಬಳೆಯೊಂದನು ಕೊಂಡೆ
ಉಡಲಿಲ್ಲ ತೊಡಲಿಲ್ಲ
ಹಾಗೆಯೇ ದಿಟ್ಟಿಸಿದೆ
ಈ ಬಳೆ ಇದ್ದಿದ್ದರೆ ಅಂಗಡಿಯಲ್ಲೆ
ಆಗುತ್ತಿತ್ತು ಬರ ಹೋಗುವವರ ಕಣ್ಣಿಗೆ ಆಹಾರ
ಈ ಬಳೆ ಏರಿದ್ದರೆ ದುಂಡಗಿನ ಕೈ
ಆಗುತ್ತಿತ್ತು ತೋಳಿನ ಹೊಳಪಿಗೆ ಸಿಂಗಾರ
ಈ ಬಳೆ ಏರಿದ್ದರೆ ದೇವರ ಕೈ
ಬೀಗುತ್ತಿತ್ತು ಭಕ್ತರನ್ನು ಆಶೀರ್ವದಿಸಿ
ಬೆಲೆಯುಂಡು ಬೆಲೆ ಕಟ್ಟಿ
ಒಂದಾದ ನಾವಿಬ್ಬರೂ
ಸೇರಲೇ ಇಲ್ಲ
ದುಂಡಾಗಿಯೇ ಇದೆ ಬಳೆ
ಬೋಳಾಗಿಯೇ ಇದೆ ಕೈ
- ಪ್ರಭಾವತಿ ಎಸ ವಿ (ಹಿರಿಯ ಸಾಹಿತಿಗಳು, ಕವಯತ್ರಿ) ಬೆಂಗಳೂರು
