ಪ್ರಕೃತಿಯ ಮಡಿಲಿನಲ್ಲಿ ತಮ್ಮನ್ನು ತಾವು ಕಾಣುವ ಚಿದು ಚಿದು ಯುವ ಸಂಚಲನ ಅವರು ಪ್ರಕೃತಿ ಸಂರಕ್ಷಣೆಗಾಗಿ ಹಲವಾರು ಕಾರ್ಯಕ್ರಮವನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಈಗ ಕವಿಯಾಗಿ ಕವನವನ್ನು ಕೂಡ ಬರೆದಿದ್ದಾರೆ. ಮುಂದೆ ಓದಿ…
ದಟ್ಟ ಕಾಡಂಚಿನ ಹಾದಿ
ಎತ್ತ ನೋಡಿದರು ಮರಗಿಡಗಳ #ಸೊಬಗು
ಪ್ರಪಾತವನ್ನು ಕಾಲಡಿಗೆ ಬಿಟ್ಟು
ತಿಳಿ ನೀಲಿಯ ಮೋಡವನ್ನು ತಲೆ ಮೇಲೆ ಇಟ್ಟು
ಸಹಜತೆಗೆ ಸಮಾಚಾರವನ್ನು ವಿಚಾರಿಸಲು ಬಿಟ್ಟು
ನುಸುಳುವ ಗಾಳಿಗೆ ಮನವನ್ನು ತೇಲಲು ಬಿಟ್ಟು
ಜಿಗಿಯುವ ನೀರಿಗೆ ಜಾರುವ #ಬಂಡಿಯನ್ನು ಕೊಟ್ಟು
ಅಗಾಧವಾದ ಪ್ರಕೃತಿ ಸ್ವರೂಪವನ್ನು ಸಹಜ ಸಾಮರ್ಥ್ಯದಿಂದ, ಅಚ್ಚರಿಯಿಂದ, ಪ್ರಕೃತಿಗೆ ಸರಿಸಾಟಿ ಬೇರೆ ಏನಿದೆಯೆಂದು ಹುಡುಕತೊಡಗಿದ ಮನ ನನ್ನದು.
• ಚಿದು ಯುವ ಸಂಚಲನ (ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ

Pic: chidu varan photography