‘ಚಂದವಲ್ಲವೇ’ ಕವನ – ಖಾದರ್



ಜೀವನ ಹೇಗಿರಬೇಕು? ಜೀವನದ ಅಂದ ಹೇಗಿದ್ದರೆ ಚಂದ… ಎನ್ನುವ ಕುರಿತಾದ ಸುಂದರ ಕವಿತೆಯನ್ನು ಕವಿ ಖಾದರ್ ಅವರು ಬರೆದಿದ್ದಾರೆ, ಈ ಕವಿತೆಯನ್ನೊಮ್ಮೆ ಓದಿ …

ಮುಂಜಾವಿನ ಮಗ್ಗುಲಲ್ಲಿ ಎದ್ದು
ಮೊರೆಯ ತೊಳೆದು ಧ್ಯಾನವ ಮಾಡಿ
ನಗುಮುಖದೀ ನಲಿಯುವುದು
ಚಂದವಲ್ಲವೇ…

ಕಾಯಕದ ಕಡೆ ಕಾಯವು ಸಾಗಿ
ಕಾರ್ಯವ ಮಾಡುತಾ ಕಾಲವ ಕಳೆದು
ತುತ್ತೊಂದು ತಳವ ಸೇರಿದರೆ
ಚಂದವಲ್ಲವೇ…

ಮಡದಿ ಮಕ್ಕಳೆಂಬ #ಸಂಸಾರವ ಹೂಡಿ
ಜೊತೆಯಲಿ ಬೆರೆತು ಜೋಪನಿಸಿ
ಸರಸವಿರಸದೀ ಅನಂದದಿದ್ದರೆ
ಚಂದವಲ್ಲವೇ…

ದುಡಿದು ತಂದ ಧರ್ಮದ ಹಣದಿ
ತಾಚೂರು ಪರರಿಗೆ ಚೂರು
ಪಾಲು ಮಾಡಿ ಹಂಚಿ ತಿಂದರೆ
ಚಂದವಲ್ಲವೇ…

ರಾಗ ದ್ವೇಷಗಳ ಮರೆತು
ಮಾನವ ಧರ್ಮವ ಅರಿತು
ಜಾತಿ ಧರ್ಮವ ಮೆಟ್ಟಿ ನಿಂತರೆ
ಚಂದವಲ್ಲವೇ…


  • ಖಾದರ್ ಎಕೆ (ಯುವ ಕವಿ)

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ಮಾನವ ಧರ್ಮ ಅರಿತರೆ ಎಲ್ಲವೂ ಚೆಂದ- ಚೆನ್ನಾಗಿದೆ.

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW